ತೋಂಟದಾರ್ಯ ಮಠದ ಆವರಣ, ಶಂಕರಲಿಂಗ ದೇವಸ್ಥಾನ, ಬನ್ನಿಮಹಾಂಕಾಳಿ ದೇವಸ್ಥಾನ, ಬೆಟಗೇರಿ ಟರ್ನಲ್ ಪೇಟೆ, ರಂಗಪ್ಪಜ್ಜನಮಠದ ಮುಂಭಾಗ, ನರಸಾಪೂರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಸಾಮೂಹಿಕವಾಗಿ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ‘ಬಂಗಾರದಂಗೆ ಜೀವನ ಸಾಗಿಸೋಣ’ಎಂದು ಪರಸ್ಪರ ಹರಸಿದರು. ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರ ಹಾಗೂ ಅಕ್ಕನ ಬಳಗದಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ನಡೆಯಿತು.ಪಂಚಾಚಾರ್ಯ ಸೇವಾ ಸಂಘದಿಂದ 72ನೇ ವರ್ಷದ ದಸರಾ ಹಾಗೂ ಶಮಿಪೂಜಾ ಕಾರ್ಯಕ್ರಮ ನಡೆಯಿತು. ಒಕ್ಕಲಗೇರಿಯಲ್ಲಿರುವ ರಾಚೋಟೇಶ್ವರ ಗುಡಿಯಿಂದ ಪಲ್ಲಕ್ಕಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಆರಂಭವಾಗಿ ಬಸಪ್ಪ ಅಬ್ಬಿಗೇರಿ ಅವರ ಮಿಲ್ನ ಆವರಣಕ್ಕೆ ತಲುಪಿತು.