‘ಕಾಂಗ್ರೆಸ್ ಕಟ್ಟಿರುವ ಇಂಡಿಯಾ ಒಕ್ಕೂಟ ಅತ್ಯಂತ ಸ್ವಾರ್ಥದಿಂದ ಕೂಡಿದೆ. ಕಾಂಗ್ರೆಸ್ ನಾಯಕರಿಗೆ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುವ ಧೈರ್ಯ ಇಲ್ಲ. ಮಮತಾ ಬ್ಯಾನರ್ಜಿ ಅವರು ಖರ್ಗೆ ಅಭ್ಯರ್ಥಿ ಆಗಲಿ ಎಂದರು. ಆದರೆ, ಅದಕ್ಕೆ ಮೊದಲ ವಿರೋಧ ವ್ಯಕ್ತವಾಗಿದ್ದೇ ಕರ್ನಾಟಕದಲ್ಲಿ. ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಆಗಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆದರೆ, ರಾಹುಲ್ ಗಾಂಧಿ ತಯಾರಿಲ್ಲ. ಮದುಮಗ ತಯಾರಿಲ್ಲದೇ ಮದುವೆ ಮಾಡುವುದಾದರೂ ಹೇಗೆ?’ ಎಂದು ಲೇವಡಿ ಮಾಡಿದರು.