‘ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಹತ್ತಾರು ಹಗರಣಗಳನ್ನು ಮಾಡಿತು. ಜತೆಗೆ ಭ್ರಷ್ಟಾಚಾರವನ್ನು ಎಲ್ಲ ರಂಗಕ್ಕೂ ಹಬ್ಬಿಸಿತು. ಈ ಕಾರಣಕ್ಕಾಗಿಯೇ ಜನರು ಅವರನ್ನು ಇಂದು ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ನಾಯಕರು ನಾವು ಆ ಭಾಗ್ಯ, ಈ ಭಾಗ್ಯ ಕೊಟ್ಟೆವು ಎಂದರು. ಆದರೆ, ಅವೆಲ್ಲವೂ ಭಾಷಣದ ಭಾಗ್ಯಗಳಾಗಿ; ರಾಜ್ಯದ ದೌರ್ಭಾಗ್ಯ ಆಯಿತು. ಅವರ ಯಾವ ಯೋಜನೆಗಳೂ ಜನರಿಗೆ ಮುಟ್ಟಲಿಲ್ಲ. ಬದಲಾಗಿ, ನಾಯಕರ ಮನೆಗಳಿಗೆ ಹಣ ತಲುಪಿತು’ ಎಂದು ಆರೋಪ ಮಾಡಿದರು.