ಆರೋಗ್ಯ ಸಿಬ್ಬಂದಿ, ಪತ್ರಿಕಾ ವಿತರಕರು, ಹಾಲು ಮಾರಾಟಗಾರರು, ಬೀಜ–ರಸಗೊಬ್ಬರ ಸೇರಿ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ಪಾಸ್ನಿಂದ ವಿನಾಯ್ತಿ ನೀಡಲಾಗಿದೆ. ಹೆರಿಗೆ, ಕ್ಯಾನ್ಸರ್, ಡಯಾಲಿಸೀಸ್, ಹತ್ತಿರದ ಸಂಬಂಧಿಕರು ಮರಣ ಹೊಂದಿದರೆ ಅಂತ್ಯಕ್ರಿಯೆಗೆ ತೆರಳಲು ಮಾತ್ರ ಇದುವರೆಗೆ ಪಾಸ್ ನೀಡಲಾಗಿದೆ. ಏಪ್ರಿಲ್ 15ರಿಂದ ಎರಡನೆಯ ಹಂತದ ಲಾಕ್ಡೌನ್ ಆರಂಭವಾಗಲಿದ್ದು, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ತೆರಳಲು ಪಾಸ್ ನೀಡುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.