ಆರು ಕಂಟೈನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು
ಗದಗನ ಹುಡ್ಕೋ ಕಾಲೊನಿ ಅಂಬಾಭವಾನಿ ಗುಡಿ ಹತ್ತಿರದ ಪ್ರದೇಶ, ಲಕ್ಕುಂಡಿಯ ವಾರ್ಡ್ ನಂ.8, ಲಕ್ಕುಂಡಿ ವಾರ್ಡ್ ನಂ.11, ಗದಗ ಕೆವಿಎಸ್ಆರ್ ಕಾಲೇಜು ಹತ್ತಿರದ ಪಂಚಾಕ್ಷರಿ ನಗರ, ರೋಣ ತಾಲ್ಲೂಕು ಹೊಳೆ ಆಲೂರ ವಾರ್ಡ್ ನಂ. 8, ಗದುಗಿನ ಕಳಸಾಪುರ ರಸ್ತೆ ಸೇವಾಲಾಲ ನಗರ, ಕಂಟೈನ್ಮೆಂಟ್ ಪ್ರದೇಶವಾಗಿದ್ದ ಈ ಆರು ಪ್ರದೇಶಗಳ ನಿರ್ಬಂಧ ತೆರವುಗೊಳಿಸಿ, ಸಾಮಾನ್ಯ ವಲಯವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.