ಲಕ್ಷ್ಮೇಶ್ವರ: ಮುಂಗಾರಿನಲ್ಲಿ ಬಿತ್ತನೆಗೊಂಡ ಪ್ರಮುಖ ಎಣ್ಣೆ ಬೆಳೆಗಳಲ್ಲಿ ಒಂದಾಗಿರುವ ಬಳ್ಳಿಶೇಂಗಾ ಉತ್ತಮ ಮಳೆಯಿಂದಾಗಿ ಸೊಗಸಾಗಿ ಬೆಳೆದಿದ್ದು ಇನ್ನೇನು ಹೂವು ಬಿಟ್ಟು ಕಾಯಿ ಕಟ್ಟುವ ಹಂತಕ್ಕೂ ಬಂದಿತ್ತು. ಆದರೆ ಇದೀಗ ಇಡೀ ಬೆಳೆ ಡಾಂಬರ ರೋಗಕ್ಕೆ ತುತ್ತಾಗಿದ್ದು, ಇಳುವರಿಯಲ್ಲಿ ಭಾರಿ ಕುಸಿತ ಆಗುವ ಭಯ ರೈತರನ್ನು ಕಂಗೆಡಿಸಿದೆ.