ಗದಗ: ಪಕ್ಕಾ ‘ರೆಸಿಡೆನ್ಶಿಯಲ್ ಏರಿಯಾ’ ಎಂಬ ಖ್ಯಾತಿ ಪಡೆರುವ ವಿವೇಕಾನಂದ ನಗರದಲ್ಲಿ ರಸ್ತೆ ಸಂಚಾರ ದುಸ್ತರವಾಗಿದೆ. ಮುಖ್ಯರಸ್ತೆಯಿಂದ ತಿರುವು ರಸ್ತೆಗಳಿಗೆ ಹೊರಳಿದರೆ ಹಳ್ಳ ದಿಣ್ಣೆ, ಗುಂಡಿಗಳ ದರ್ಶನ ಆಗುತ್ತದೆ. ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಅಡ್ಡಾವುದು ಕಷ್ಟಕರ. ಮಳೆಗಾಲದಲ್ಲಿ ಜಾರುವ ಸಮಸ್ಯೆಯಾದರೆ, ಉಳಿದ ಋತುಗಳಲ್ಲಿ ನಿತ್ಯವೂ ದೂಳಿನ ಮಜ್ಜನ.