ಸಂಗಯ್ಯ ವಸ್ತ್ರದ ಎಂಬುವವರು ಸ್ಮಶಾನಕ್ಕೆ ಜಾಗ ನೀಡಿದ್ದು, ಅದನ್ನು ಖರೀದಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ದೂರು ನೀಡಿದಾಗ ಭೂಮಾಪನ ಇಲಾಖೆಯ ಮೇಲ್ವಿಚಾರಕಿ ಉಮಾದೇವಿ ಜಾಲಿಹಾಳ ಮೇಲೆ ಗರಂ ಆದ ಜಿಲ್ಲಾಧಿಕಾರಿ, ಭೂಮಿ ನೀಡಲು ಹಿಂಜರಿಯುವ ದಿನಗಳಲ್ಲಿ ತಾವೇ ಭೂಮಿ ನೀಡಲು ಬಂದರೂ ಖರೀದಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿದರು. ನಂತರ ಭೂಮಾಪನ ವಿಭಾಗಕ್ಕೆ ತೆರಳಿ ಕಡತಗಳನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಡತಗಳ ವಿಲೇವಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ತಾಕೀತು ಮಾಡಿದರು.