<p><strong>ನರೇಗಲ್:</strong> ಜಮೀನಿನಲ್ಲಿ ಕಸದ ಎಡೆ ಹೊಡೆಯಲು ಎತ್ತುಗಳು ಸಿಗದ ಕಾರಣ ರೈತರು, ಕೃಷಿ ಚಟುವಟಿಕೆಗೆ ಬೈಕ್ಗಳನ್ನು ಬಳಸುತ್ತಿದ್ದಾರೆ. </p> <p>ಬೈಕ್ನ ಹಿಂಬದಿಯಲ್ಲಿನ ಕ್ಯಾರಿಯರ್ಗೆ ಕಬ್ಬಿಣದ ಸರಳುಗಳಿಂದ ವೆಲ್ಡಿಂಗ್ ಮಾಡಿಸಿ, ಅದಕ್ಕೆ 5 ಅಡಿ ಉದ್ದದ ಕಬ್ಬಿಣದ ಪೈಪ್ ಅಳವಡಿಸಿ ಎರಡು ಅಡಿಗೆ ಒಂದರಂತೆ 5 ಕುಂಟಿಗಳನ್ನು ಜೋಡಿಸಲಾಗುತ್ತದೆ. ಜೋಲಿ ತಪ್ಪಿ ಬೀಳದಂತೆ ಮತ್ತು ಚಲಿಸಲು ಅನುಕೂಲ ಆಗುವಂತೆ ಹಿಂಬದಿಗೆ ಎರಡು ಬೈಕ್ ಗಾಲಿಗಳನ್ನು ಜೋಡಿಸಲಾಗುತ್ತದೆ. ಬೈಕ್ ಸವಾರ ಗೇರ್ನಲ್ಲಿ ಚಲಿಸುವಾಗ, ಕುಂಟಿ ಹಿಡಿದಿರುವ ಕಾರ್ಮಿಕರು ಸುಲಭವಾಗಿ ಸಾಗಬಹುದು.</p> <p>ಹೆಸರು, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ತೊಗರಿ, ಸೂರ್ಯಕಾಂತಿ, ಶೇಂಗಾ, ಅಲಸಂದೆ ಸೇರಿ ವಿವಿಧ ಬೆಳೆಗಳಲ್ಲಿ ಎಡೆ ಹೊಡೆಯಲು ಬಳಕೆಯಾಗುತ್ತಿದೆ.</p> <p>‘ಒಂದು ದಿನಕ್ಕೆ ಒಂದು ಜೋಡಿ ಎತ್ತುಗಳ ಬಾಡಿಗೆ ₹2,200. ಅದಕ್ಕೆ ಮೂರು ಕುಂಟಿ ಕಟ್ಟುತ್ತಾರೆ. ಕುಂಟಿ ಹಿಡಿಯುವ ಪ್ರತಿ ಕಾರ್ಮಿಕನ ಕೂಲಿ ದಿನಕ್ಕೆ ₹400. ದಿನಕ್ಕೆ ಅಂದಾಜು ₹3 ಸಾವಿರ ಖರ್ಚು ಮಾಡಿದರೂ ಎತ್ತುಗಳಿಂದ 3 ಎಕರೆ ಹೊಲ ಮಾತ್ರ ಎಡೆ ಹೊಡೆಯಲು ಸಾಧ್ಯವಾಗುತ್ತದೆ. ಆದರೆ, ಅದೇ ಹಣದಲ್ಲಿ ಬೈಕ್ ಬಳಸಿದರೆ, 2ರಿಂದ 2.5 ಲೀಟರ್ ಪೆಟ್ರೋಲ್ನಲ್ಲಿ ದಿನಕ್ಕೆ 8ರಿಂದ 10 ಎಕರೆ ಜಮೀನು ಎಡೆ ಹೊಡೆಯಬಹುದು’ ಎಂದು ರೈತರು ತಿಳಿಸಿದರು.</p> <p>‘ಎತ್ತುಗಳಿಂದ ಎಡೆ ಹೊಡೆದಲ್ಲಿ ಹೆಚ್ಚು ಸಮಯ ಮತ್ತು ವೆಚ್ಚ ತಗಲುತ್ತದೆ. ಎತ್ತುಗಳಿಗಾಗಿ ಹುಡುಕಿದರೂ ಸಿಗದಿರುವ ಕಾಲದಲ್ಲಿ ಬೈಕ್ ರೈತರ ಪಾಲಿಗೆ ಎತ್ತುಗಳ ಸಹಾಯವಿಲ್ಲದೆ ಉಳುಮೆ ಮಾಡಲು ವರದಾನವಾಗಿದೆ’ ಎಂದು ನರೇಗಲ್ ರೈತ ವಿರೂಪಾಕ್ಷ ಲಕ್ಕನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ದನಕರುಗಳಿಗೆ ಮೇವಿನ ಕೊರತೆ ಕಾರಣ ಸಾಕಲು ಹಿಂಜರಿಯುತ್ತಾರೆ. ಇದರಿಂದ ಉಳುಮೆಗೆ ಎತ್ತುಗಳು ಸಿಗುತ್ತಿಲ್ಲ. ಸರ್ಕಾರ ಮೇವಿನ ಬ್ಯಾಂಕ್ ಸ್ಥಾಪಿಸಿದರೆ, ಕೃಷಿಗೆ ಅನುಕೂಲ ಆಗಬಹುದು</blockquote><span class="attribution"> ವೀರೇಶ ನೇಗಲಿ, ಸಾವಯವ ಕೃಷಿಕ, ಕೋಟುಮಚಗಿ</span></div>.<div><blockquote>ನಮ್ಮಲ್ಲಿ ಕೃಷಿಗೆ ಅಗತ್ಯವಿದ್ದಾಗ ಹೊಲದಲ್ಲಿ ದುಡಿಯಲು ಕಾರ್ಮಿಕರು ಹಾಗೂ ಉಳುಮೆ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹೀಗಾಗಿ ಬೈಕ್ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ </blockquote><span class="attribution">ವಿರೂಪಾಕ್ಷ ಲಕ್ಕನಗೌಡ್ರ, ರೈತ, ನರೇಗಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರೇಗಲ್:</strong> ಜಮೀನಿನಲ್ಲಿ ಕಸದ ಎಡೆ ಹೊಡೆಯಲು ಎತ್ತುಗಳು ಸಿಗದ ಕಾರಣ ರೈತರು, ಕೃಷಿ ಚಟುವಟಿಕೆಗೆ ಬೈಕ್ಗಳನ್ನು ಬಳಸುತ್ತಿದ್ದಾರೆ. </p> <p>ಬೈಕ್ನ ಹಿಂಬದಿಯಲ್ಲಿನ ಕ್ಯಾರಿಯರ್ಗೆ ಕಬ್ಬಿಣದ ಸರಳುಗಳಿಂದ ವೆಲ್ಡಿಂಗ್ ಮಾಡಿಸಿ, ಅದಕ್ಕೆ 5 ಅಡಿ ಉದ್ದದ ಕಬ್ಬಿಣದ ಪೈಪ್ ಅಳವಡಿಸಿ ಎರಡು ಅಡಿಗೆ ಒಂದರಂತೆ 5 ಕುಂಟಿಗಳನ್ನು ಜೋಡಿಸಲಾಗುತ್ತದೆ. ಜೋಲಿ ತಪ್ಪಿ ಬೀಳದಂತೆ ಮತ್ತು ಚಲಿಸಲು ಅನುಕೂಲ ಆಗುವಂತೆ ಹಿಂಬದಿಗೆ ಎರಡು ಬೈಕ್ ಗಾಲಿಗಳನ್ನು ಜೋಡಿಸಲಾಗುತ್ತದೆ. ಬೈಕ್ ಸವಾರ ಗೇರ್ನಲ್ಲಿ ಚಲಿಸುವಾಗ, ಕುಂಟಿ ಹಿಡಿದಿರುವ ಕಾರ್ಮಿಕರು ಸುಲಭವಾಗಿ ಸಾಗಬಹುದು.</p> <p>ಹೆಸರು, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ತೊಗರಿ, ಸೂರ್ಯಕಾಂತಿ, ಶೇಂಗಾ, ಅಲಸಂದೆ ಸೇರಿ ವಿವಿಧ ಬೆಳೆಗಳಲ್ಲಿ ಎಡೆ ಹೊಡೆಯಲು ಬಳಕೆಯಾಗುತ್ತಿದೆ.</p> <p>‘ಒಂದು ದಿನಕ್ಕೆ ಒಂದು ಜೋಡಿ ಎತ್ತುಗಳ ಬಾಡಿಗೆ ₹2,200. ಅದಕ್ಕೆ ಮೂರು ಕುಂಟಿ ಕಟ್ಟುತ್ತಾರೆ. ಕುಂಟಿ ಹಿಡಿಯುವ ಪ್ರತಿ ಕಾರ್ಮಿಕನ ಕೂಲಿ ದಿನಕ್ಕೆ ₹400. ದಿನಕ್ಕೆ ಅಂದಾಜು ₹3 ಸಾವಿರ ಖರ್ಚು ಮಾಡಿದರೂ ಎತ್ತುಗಳಿಂದ 3 ಎಕರೆ ಹೊಲ ಮಾತ್ರ ಎಡೆ ಹೊಡೆಯಲು ಸಾಧ್ಯವಾಗುತ್ತದೆ. ಆದರೆ, ಅದೇ ಹಣದಲ್ಲಿ ಬೈಕ್ ಬಳಸಿದರೆ, 2ರಿಂದ 2.5 ಲೀಟರ್ ಪೆಟ್ರೋಲ್ನಲ್ಲಿ ದಿನಕ್ಕೆ 8ರಿಂದ 10 ಎಕರೆ ಜಮೀನು ಎಡೆ ಹೊಡೆಯಬಹುದು’ ಎಂದು ರೈತರು ತಿಳಿಸಿದರು.</p> <p>‘ಎತ್ತುಗಳಿಂದ ಎಡೆ ಹೊಡೆದಲ್ಲಿ ಹೆಚ್ಚು ಸಮಯ ಮತ್ತು ವೆಚ್ಚ ತಗಲುತ್ತದೆ. ಎತ್ತುಗಳಿಗಾಗಿ ಹುಡುಕಿದರೂ ಸಿಗದಿರುವ ಕಾಲದಲ್ಲಿ ಬೈಕ್ ರೈತರ ಪಾಲಿಗೆ ಎತ್ತುಗಳ ಸಹಾಯವಿಲ್ಲದೆ ಉಳುಮೆ ಮಾಡಲು ವರದಾನವಾಗಿದೆ’ ಎಂದು ನರೇಗಲ್ ರೈತ ವಿರೂಪಾಕ್ಷ ಲಕ್ಕನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ದನಕರುಗಳಿಗೆ ಮೇವಿನ ಕೊರತೆ ಕಾರಣ ಸಾಕಲು ಹಿಂಜರಿಯುತ್ತಾರೆ. ಇದರಿಂದ ಉಳುಮೆಗೆ ಎತ್ತುಗಳು ಸಿಗುತ್ತಿಲ್ಲ. ಸರ್ಕಾರ ಮೇವಿನ ಬ್ಯಾಂಕ್ ಸ್ಥಾಪಿಸಿದರೆ, ಕೃಷಿಗೆ ಅನುಕೂಲ ಆಗಬಹುದು</blockquote><span class="attribution"> ವೀರೇಶ ನೇಗಲಿ, ಸಾವಯವ ಕೃಷಿಕ, ಕೋಟುಮಚಗಿ</span></div>.<div><blockquote>ನಮ್ಮಲ್ಲಿ ಕೃಷಿಗೆ ಅಗತ್ಯವಿದ್ದಾಗ ಹೊಲದಲ್ಲಿ ದುಡಿಯಲು ಕಾರ್ಮಿಕರು ಹಾಗೂ ಉಳುಮೆ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹೀಗಾಗಿ ಬೈಕ್ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ </blockquote><span class="attribution">ವಿರೂಪಾಕ್ಷ ಲಕ್ಕನಗೌಡ್ರ, ರೈತ, ನರೇಗಲ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>