‘ನಮ್ಮಪ್ಪ ನಮಗೆ ಆಲದ ಮರದಂತಿದ್ದರು. ಅವರ ನೆರಳಿನಲ್ಲಿ ನಾವೆಲ್ಲ ತುಂಬಾ ಸಂತೋಷದಿಂದ ಇದ್ದೆವು. ಅಪ್ಪ ತಮ್ಮ ಇತಿಮಿತಿಯೊಳಗೆ ನಮಗೆ ಯಾವ ಕೊರತೆಯೂ ಉಂಟಾಗದಂತೆ ನಮ್ಮನ್ನು ಸಲುಹಿದರು. ಇಂದು ಅವರಿಲ್ಲದ ಮನೆ ಮನೆ ಯಂತಿಲ್ಲ. ಅಪ್ಪ ಸದಾ ನಮ್ಮಸುತ್ತ ಸುಳಿಯುತ್ತಿರುವ ಅನು ಭವವಾಗುತ್ತಿದೆ’ ಎಂದುಮಗಳು ಮಂಜುಳಾ ಅಪ್ಪನನ್ನುನೆನೆದು ಕಣ್ಣೀರಾದರು.ಜೀವನದಲ್ಲಿ ನಮಗಾರಿಗೂ ಯಾವ ಕಷ್ಟವನ್ನು ಕೊಡಲಿಲ್ಲ. ಸದಾ ನಮ್ಮೆಲ್ಲ ರೊಂದಿಗೆ ನಗು ನಗುತ್ತಾ ಇರುತ್ತಿದ್ದರು. ಜೀವನದಲ್ಲಿ ಯಾವ ಮಕ್ಕಳಿ ಗೂ ಇಂತಹ ಕಷ್ಟ ಬರಬಾರದು. ಇಲ್ಲಿಯವರೆಗೂ ನಮಗೆಲ್ಲ ನಮ್ಮ ಅಪ್ಪನಿದ್ದಾನೆ ಎನ್ನುವ ಧೈರ್ಯವಿತ್ತು. ಆ ಧೈರ್ಯವೇನಮ್ಮನ್ನು ಮುನ್ನಡೆಸುತ್ತಿತ್ತು, ಈಗ...’ ಎಂದು ಮುಂದೆ ಮಾತನಾಡಲಾಗದೆ ಮಗಳು ವಿದ್ಯಾಶ್ರೀ ಮೌನಕ್ಕೆ ಜಾರಿದರು.