‘ಭಾವಪ್ರಚಾರ ಪರಿಷತ್ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಸ್ವಾಮಿ ಅನುಪಮಾನಂದಜಿ, ಸ್ವಾಮಿ ಬೋಧಸ್ವರೂಪಾನಂದಜಿ, ಸ್ವಾಮಿ ಆತ್ಮಪ್ರಾಣಾಂದಜಿ, ಸ್ವಾಮಿ ವೀರೇಶಾನಂದಜಿ, ಫಕ್ಕೀರೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಸ್ವಾಮಿ ಪ್ರಕಾಶಾನಂದಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಂತರ ಎರಡು ಉಪನ್ಯಾಸ ಮಾಲಿಕೆ ನಡೆಯಲಿವೆ. ಬೆಳಿಗ್ಗೆ 9ಕ್ಕೆ ಮೊದಲ ಉಪನ್ಯಾಸ ಮಾಲಿಕೆಯಲ್ಲಿ ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ವಿವಿಧ ಮಠಾಧೀಶರು ಉಪನ್ಯಾಸ ನೀಡುವರು. 2ನೇ ಉಪನ್ಯಾಸ ಮಾಲಿಕೆಯಲ್ಲಿ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ಸೇರಿ ಅನೇಕ ಸಾಧಕರು ಉಪನ್ಯಾಸ ನೀಡುವರು’ ಎಂದು ಅವರು ವಿವರಿಸಿದರು.