<p><strong>ಗದಗ:</strong> ‘ಭೂಗೋಳಶಾಸ್ತ್ರದ ಮೂಲಭೂತ ಜ್ಞಾನವು ಆಧುನಿಕ ಜಿಯೋಸ್ಪೇಷಿಯಲ್ ಹಾಗೂ ಜಿಯೋಇನ್ಫ್ರ್ಮಾಟಿಕ್ಸ್ ತಂತ್ರಜ್ಞಾನಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಅವಶ್ಯಕವಾಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ ಹೇಳಿದರು.</p>.<p>ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್ನ ಮೂಲಭೂತ ತತ್ತ್ವಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಪ್ರಾಧ್ಯಾಪಕ ಅಶೋಕ್ ಡಿ. ಹಂಜಗಿ ಭೂಗೋಳಶಾಸ್ತ್ರದ ತತ್ತ್ವಾಧಾರಿತ ಅಂಶಗಳು ಮತ್ತು ಅವುಗಳ ಜಿಯೋಇನ್ಫರ್ಮಾಟಿಕ್ಸ್ನೊಂದಿಗೆ ಇರುವ ಸಂಯೋಜನೆಯನ್ನು ವಿವರಿಸಿದರು.</p>.<p>ಎಂಎಸ್ಸಿ ಜಿಯೋಇನ್ಫರ್ಮಾಟಿಕ್ಸ್ ಕಾರ್ಯಕ್ರಮದ ಸಂಯೋಜಕ ಸುರೇಶ್ ಲಮಾಣಿ ಸ್ವಾಗತಿಸಿದರು. ಬಿಎಸ್ಸಿ ಜಿಐಎಸ್ ಮತ್ತು ಕಂಪ್ಯೂಟರ್ ಸೈನ್ಸ್ ಕಾರ್ಯಕ್ರಮದ ಸಂಯೋಜಕ ಯೋಗೇಶ್ ಕರಿಕಟ್ಟಿ ವಂದಿಸಿದರು. ಶ್ರೇಯಾಂಕಾ ವಿ. ನಿರೂಪಿಸಿದರು.</p>.<p>ಈ ಕಾರ್ಯಕ್ರಮದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ಭೂಗೋಳಶಾಸ್ತ್ರದ ಮೂಲಭೂತ ಜ್ಞಾನವು ಆಧುನಿಕ ಜಿಯೋಸ್ಪೇಷಿಯಲ್ ಹಾಗೂ ಜಿಯೋಇನ್ಫ್ರ್ಮಾಟಿಕ್ಸ್ ತಂತ್ರಜ್ಞಾನಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಅವಶ್ಯಕವಾಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ ಹೇಳಿದರು.</p>.<p>ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್ನ ಮೂಲಭೂತ ತತ್ತ್ವಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಪ್ರಾಧ್ಯಾಪಕ ಅಶೋಕ್ ಡಿ. ಹಂಜಗಿ ಭೂಗೋಳಶಾಸ್ತ್ರದ ತತ್ತ್ವಾಧಾರಿತ ಅಂಶಗಳು ಮತ್ತು ಅವುಗಳ ಜಿಯೋಇನ್ಫರ್ಮಾಟಿಕ್ಸ್ನೊಂದಿಗೆ ಇರುವ ಸಂಯೋಜನೆಯನ್ನು ವಿವರಿಸಿದರು.</p>.<p>ಎಂಎಸ್ಸಿ ಜಿಯೋಇನ್ಫರ್ಮಾಟಿಕ್ಸ್ ಕಾರ್ಯಕ್ರಮದ ಸಂಯೋಜಕ ಸುರೇಶ್ ಲಮಾಣಿ ಸ್ವಾಗತಿಸಿದರು. ಬಿಎಸ್ಸಿ ಜಿಐಎಸ್ ಮತ್ತು ಕಂಪ್ಯೂಟರ್ ಸೈನ್ಸ್ ಕಾರ್ಯಕ್ರಮದ ಸಂಯೋಜಕ ಯೋಗೇಶ್ ಕರಿಕಟ್ಟಿ ವಂದಿಸಿದರು. ಶ್ರೇಯಾಂಕಾ ವಿ. ನಿರೂಪಿಸಿದರು.</p>.<p>ಈ ಕಾರ್ಯಕ್ರಮದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಜಿಯೋಇನ್ಫರ್ಮಾಟಿಕ್ಸ್ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>