‘ರೈತರು ಈಗಾಗಲೇ ಮುಂಗಾರು ಬೆಳೆ ಹಾನಿಯಿಂದ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಸದ್ಯ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಕಾಯಿ ಕಟ್ಟಿದ್ದು, ಸುಲಿಗಾಯಿ ಇದೆ. ರೈತರು ಜಮೀನಿನಲ್ಲಿ ಇಲ್ಲದಿರುವುದನ್ನು ಗಮನಿಸಿ ಕಳ್ಳರು ಹಸಿ ಕಡಲೆ ಮಾರಾಟ ಮಾಡಲು ಕಿತ್ತುಕೊಂಡು ಹೋಗುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕಳ್ಳರ ಕಾಟ ತಪ್ಪಿಸಿ ರೈತರ ನೆರವಿಗೆ ಬರಬೇಕು’ ಎಂದು ಕೊಡಗಾನೂರ ರೈತರಾದ ರೇಣುಕಯ್ಯ ಅಂಗಡಿ ಮನವಿ ಮಾಡಿದ್ದಾರೆ.