ನಗರದ ಶಹಪೂರ ಪೇಟೆ, ಹುಡ್ಕೋ ಕಾಲೊನಿ, ಆದರ್ಶ ನಗರ, ಹಾಳಕೇರಿ ಮಠ ಹತ್ತಿರ, ನಗರಸಭೆ ಕಚೇರಿ ಸಮೀಪ, ಕೆಎಸ್ಎಸ್ ಕಾಲೇಜು ಹಿಂಭಾಗ, ಸಿಕ್ಕಲಗಾರ ಓಣಿ, ಕರ್ನಾಟಕ ಚಿತ್ರಮಂದಿರ ಹತ್ತಿರ, ಹಳೆ ಕೋರ್ಟ್ ಸಮೀಪದ ಬಿಸಿಎಂ ಬಡಾವಣೆ, ಖಾನತೋಟದ ಬಾವಿ, ರಾಚೋಟೇಶ್ವರ ದೇವಸ್ಥಾನದ ಮೂರು ಕಡೆಗಳಲ್ಲಿ, ಜರ್ಮನ್ ಆಸ್ಪತ್ರೆ ಸಮೀಪ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ವಿಸರ್ಜನೆಗೆ ವೇಳೆ ಪೂಜೆ ನೆರವೇರಿಸಲು ತಾತ್ಕಾಲಿಕ ಸಿಮೆಂಟ್ ವೇದಿಕೆಯನ್ನೂ ನಿರ್ಮಿಸಲಾಗಿದೆ. ಇದರಲ್ಲಿ ಚಿಕ್ಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು.