ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ವಡ್ಡರಗೇರಿಯ ದುರ್ಗಾದೇವಿ ಜಾತ್ರೆ ವಿಜೃಂಭಣೆಯಿದ ಜರುಗಿತು. ದೇವಿ ಜಾತ್ರೆ ಅಂಗವಾಗಿ ಬುಧವಾರ ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು.
ಪ್ರತಿ 3 ವರ್ಷಕೊಮ್ಮೆ ನಡೆಯುವ ಜಾತ್ರೆ ಅಂಗವಾಗಿ ಮಂಗಳವಾರ ಪಲ್ಲಕ್ಕಿ ಉತ್ಸವ, ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬುಧವಾರ ಅಭಿಷೇಕದ ನಂತರ ದೇವಸ್ಥಾನದ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು.
ದೇವಸ್ಥಾನದ ಟ್ರಸ್ಟ್ ಕಮಿಟಿಯ ಯಲ್ಲಪ್ಪ ಪೂಜಾರ, ದುರುಗಪ್ಪ ಸಂಕದಾಳ, ಮುದುಕಪ್ಪ ಪೂಜಾರ, ಗಿಡ್ಡಪ್ಪ ಮತ್ತೂರ, ಜಿ.ಪಂ ಸದಸ್ಯ ಹನಮಂತಪ್ಪ ಪೂಜಾರ ಇದ್ದರು.