<p><strong>ಲಕ್ಷ್ಮೇಶ್ವರ:</strong> ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.</p>.<p>ಶಿಕ್ಷಕ ಕೆ.ಆರ್.ಲಮಾಣಿ ಮಾತನಾಡಿ, ‘ಬಂಜಾರ ಸಮಾಜದವರು ಮೊದಲು ವಜ್ರ, ಬೆಳ್ಳಿ, ಬಂಗಾರದ ವ್ಯಾಪಾರ ಮಾಡುತ್ತಿದ್ದರು. ಮತ್ತು ಸ್ವಾತಂತ್ರಕ್ಕಾಗಿ ದೇಶದ ಹೋರಾಟಗಾರರಿಗೆ ಆಹಾರ, ನೀರು ಸರಬರಾಜು ಮಾಡುತ್ತಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ಕುತಂತ್ರದಿಂದ ಬಂಜಾರ ಸಮುದಾಯ ಉಳಿದ ಸಮಾಜದಿಂದ ದೂರವಿರಬೇಕಾಯಿತು’ ಎಂದರು.</p>.<p>‘ಇಂದಿಗೂ ತಾಂಡಾಗಳು ತಾಂಡಾಗಳಾಗಿಯೇ ಉಳಿದಿವೆ. ಕಂದಾಯ ಗ್ರಾಮ ಆಗಿಲ್ಲ. 2023ರಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಕಂದಾಯ ಗ್ರಾಮ ಆಗಿವೆ. ಆದರೆ ಉಳಿದ ಕಡೆ ಇನ್ನೂ ಆಗಬೇಕಾಗಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ. ಚಿಟಗಿ, ವೈ.ಎಂ. ಬಸಾಪುರ, ಆರ್.ಎಂ. ಜಂಬೇರಾಳ, ಬಿ.ಎಸ್. ಹೆಬ್ಬಾಳ, ಐ.ಎಂ. ಮತ್ತೂರ, ಎಸ್.ವೈ. ನವಲಗುಂದ, ಬಿ.ಬಿ. ಬಳಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ:</strong> ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.</p>.<p>ಶಿಕ್ಷಕ ಕೆ.ಆರ್.ಲಮಾಣಿ ಮಾತನಾಡಿ, ‘ಬಂಜಾರ ಸಮಾಜದವರು ಮೊದಲು ವಜ್ರ, ಬೆಳ್ಳಿ, ಬಂಗಾರದ ವ್ಯಾಪಾರ ಮಾಡುತ್ತಿದ್ದರು. ಮತ್ತು ಸ್ವಾತಂತ್ರಕ್ಕಾಗಿ ದೇಶದ ಹೋರಾಟಗಾರರಿಗೆ ಆಹಾರ, ನೀರು ಸರಬರಾಜು ಮಾಡುತ್ತಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ಕುತಂತ್ರದಿಂದ ಬಂಜಾರ ಸಮುದಾಯ ಉಳಿದ ಸಮಾಜದಿಂದ ದೂರವಿರಬೇಕಾಯಿತು’ ಎಂದರು.</p>.<p>‘ಇಂದಿಗೂ ತಾಂಡಾಗಳು ತಾಂಡಾಗಳಾಗಿಯೇ ಉಳಿದಿವೆ. ಕಂದಾಯ ಗ್ರಾಮ ಆಗಿಲ್ಲ. 2023ರಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಕಂದಾಯ ಗ್ರಾಮ ಆಗಿವೆ. ಆದರೆ ಉಳಿದ ಕಡೆ ಇನ್ನೂ ಆಗಬೇಕಾಗಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ. ಚಿಟಗಿ, ವೈ.ಎಂ. ಬಸಾಪುರ, ಆರ್.ಎಂ. ಜಂಬೇರಾಳ, ಬಿ.ಎಸ್. ಹೆಬ್ಬಾಳ, ಐ.ಎಂ. ಮತ್ತೂರ, ಎಸ್.ವೈ. ನವಲಗುಂದ, ಬಿ.ಬಿ. ಬಳಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>