ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.
ಶಿಕ್ಷಕ ಕೆ.ಆರ್.ಲಮಾಣಿ ಮಾತನಾಡಿ, ‘ಬಂಜಾರ ಸಮಾಜದವರು ಮೊದಲು ವಜ್ರ, ಬೆಳ್ಳಿ, ಬಂಗಾರದ ವ್ಯಾಪಾರ ಮಾಡುತ್ತಿದ್ದರು. ಮತ್ತು ಸ್ವಾತಂತ್ರಕ್ಕಾಗಿ ದೇಶದ ಹೋರಾಟಗಾರರಿಗೆ ಆಹಾರ, ನೀರು ಸರಬರಾಜು ಮಾಡುತ್ತಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ಕುತಂತ್ರದಿಂದ ಬಂಜಾರ ಸಮುದಾಯ ಉಳಿದ ಸಮಾಜದಿಂದ ದೂರವಿರಬೇಕಾಯಿತು’ ಎಂದರು.
‘ಇಂದಿಗೂ ತಾಂಡಾಗಳು ತಾಂಡಾಗಳಾಗಿಯೇ ಉಳಿದಿವೆ. ಕಂದಾಯ ಗ್ರಾಮ ಆಗಿಲ್ಲ. 2023ರಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಕಂದಾಯ ಗ್ರಾಮ ಆಗಿವೆ. ಆದರೆ ಉಳಿದ ಕಡೆ ಇನ್ನೂ ಆಗಬೇಕಾಗಿದೆ’ ಎಂದರು.
ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ. ಚಿಟಗಿ, ವೈ.ಎಂ. ಬಸಾಪುರ, ಆರ್.ಎಂ. ಜಂಬೇರಾಳ, ಬಿ.ಎಸ್. ಹೆಬ್ಬಾಳ, ಐ.ಎಂ. ಮತ್ತೂರ, ಎಸ್.ವೈ. ನವಲಗುಂದ, ಬಿ.ಬಿ. ಬಳಿಗಾರ ಇದ್ದರು.