ಈ ವಿಚಾರವಾಗಿ ಸಂಸದ ಶಿವಕುಮಾರ ಉದಾಸಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಅರಣ್ಯ ಇಲಾಖೆಯು ಕಪ್ಪತ್ತಗುಡ್ಡ ವನ್ಯಜೀವಿಧಾಮದ ಸುತ್ತಲೂ ಇರುವ 574.01 ಚ.ಕಿ.ಮೀ. ಕ್ಷೇತ್ರವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂಬ ವಿಷಯ ತಿಳಿದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಫೆಬ್ರುವರಿಯಲ್ಲಿಯೇ ಪತ್ರ ಬರೆದಿದ್ದೆ’ ಎಂದು ಅವರು ತಿಳಿಸಿದರು.