<p><strong>ಗದಗ</strong>: ಲಕ್ಕುಂಡಿ ಗ್ರಾಮದಲ್ಲಿನಡೆದಿರುವ ಉತ್ಖನನದಲ್ಲಿ ಮಂಗಳವಾರ ನವ ಶಿಲಾಯುಗದ ಬೂದು ಬಣ್ಣದ ಮಡಿಕೆ ಮತ್ತು ಜಿನ ಚಿತ್ರವಿರುವ ಕಲ್ಲಿನ ಪೀಠ ಸಿಕ್ಕಿದೆ. </p>.<p>‘ದೊಡ್ಡಗಾತ್ರದ ಒಡೆದ ಮಡಿಕೆಯ ಅರ್ಧ ಭಾಗದ ಜತೆಗೆ ಎರಡು ಮೂರು ಕವಡೆ ಸಿಕ್ಕಿವೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.</p>.<p>ಉತ್ಖನನ ಕೆಲಸ ಐದೂವರೆ ಅಡಿ ಆಳದವರೆಗೆ ನಡೆದಿದೆ. ಒಟ್ಟು 34 ಮಂದಿ ಕಾರ್ಮಿಕರು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.</p>.<p><strong>ದೇವಸ್ಥಾನವೇ ಮನೆ:</strong> ಗ್ರಾಮದಲ್ಲಿ ಹಲವು ದೇವಸ್ಥಾನಗಳಿವೆ. ಅವುಗಳನ್ನೇ ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಚೌಕಿಮಠ ಕುಟುಂಬದವರು ವಾಸಿಸುವ ಮನೆಯಲ್ಲಿ ದೇವಸ್ಥಾನವಿದ್ದು, ಐದು ತಲೆಮಾರಿನಿಂದ ಅಲ್ಲೇ ವಾಸವಿದ್ದಾರೆ.</p>.<p>‘ಮಹಾಂತೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತ ವಾಸವಿದ್ದೇವೆ. ಇತಿಹಾಸಕಾರರು ಬಂದು ಇದು ಮಹಾಂತೇಶ್ವರ ಸ್ವಾಮಿ ಅಲ್ಲ; ಅರ್ಧನಾರೀಶ್ವರ ಎಂದಿದ್ದಾರೆ. ಜೀರ್ಣೋದ್ಧಾರಕ್ಕಾಗಿ ಮನೆ ಬಿಟ್ಟುಕೊಡಬೇಕಾಗಿ ಕೇಳಿದ್ದಾರೆ. ಸರ್ಕಾರ ನಮಗೆ ಬೇರೆ ಕಡೆ ಜಾಗ, ಮನೆ ಕೊಟ್ಟರೆ ಹೋಗಲು ಸಿದ್ಧರಿದ್ದೇವೆ’ ಎಂದು ಕುಟುಂಬದ ಮುಖ್ಯಸ್ಥರಾದ ಶರಣಯ್ಯ ಚೌಕಿಮಠ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ಲಕ್ಕುಂಡಿ ಗ್ರಾಮದಲ್ಲಿನಡೆದಿರುವ ಉತ್ಖನನದಲ್ಲಿ ಮಂಗಳವಾರ ನವ ಶಿಲಾಯುಗದ ಬೂದು ಬಣ್ಣದ ಮಡಿಕೆ ಮತ್ತು ಜಿನ ಚಿತ್ರವಿರುವ ಕಲ್ಲಿನ ಪೀಠ ಸಿಕ್ಕಿದೆ. </p>.<p>‘ದೊಡ್ಡಗಾತ್ರದ ಒಡೆದ ಮಡಿಕೆಯ ಅರ್ಧ ಭಾಗದ ಜತೆಗೆ ಎರಡು ಮೂರು ಕವಡೆ ಸಿಕ್ಕಿವೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.</p>.<p>ಉತ್ಖನನ ಕೆಲಸ ಐದೂವರೆ ಅಡಿ ಆಳದವರೆಗೆ ನಡೆದಿದೆ. ಒಟ್ಟು 34 ಮಂದಿ ಕಾರ್ಮಿಕರು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.</p>.<p><strong>ದೇವಸ್ಥಾನವೇ ಮನೆ:</strong> ಗ್ರಾಮದಲ್ಲಿ ಹಲವು ದೇವಸ್ಥಾನಗಳಿವೆ. ಅವುಗಳನ್ನೇ ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಚೌಕಿಮಠ ಕುಟುಂಬದವರು ವಾಸಿಸುವ ಮನೆಯಲ್ಲಿ ದೇವಸ್ಥಾನವಿದ್ದು, ಐದು ತಲೆಮಾರಿನಿಂದ ಅಲ್ಲೇ ವಾಸವಿದ್ದಾರೆ.</p>.<p>‘ಮಹಾಂತೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತ ವಾಸವಿದ್ದೇವೆ. ಇತಿಹಾಸಕಾರರು ಬಂದು ಇದು ಮಹಾಂತೇಶ್ವರ ಸ್ವಾಮಿ ಅಲ್ಲ; ಅರ್ಧನಾರೀಶ್ವರ ಎಂದಿದ್ದಾರೆ. ಜೀರ್ಣೋದ್ಧಾರಕ್ಕಾಗಿ ಮನೆ ಬಿಟ್ಟುಕೊಡಬೇಕಾಗಿ ಕೇಳಿದ್ದಾರೆ. ಸರ್ಕಾರ ನಮಗೆ ಬೇರೆ ಕಡೆ ಜಾಗ, ಮನೆ ಕೊಟ್ಟರೆ ಹೋಗಲು ಸಿದ್ಧರಿದ್ದೇವೆ’ ಎಂದು ಕುಟುಂಬದ ಮುಖ್ಯಸ್ಥರಾದ ಶರಣಯ್ಯ ಚೌಕಿಮಠ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>