<p><strong>ಲಕ್ಷ್ಮೇಶ್ವರ:</strong> ‘12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರು ಕೇವಲ ಮಲಿನ ಬಟ್ಟೆಗಳನ್ನಷ್ಟೆ ತೊಳೆಯಲಿಲ್ಲ. ಅದರೊಂದಿಗೆ ಜನರ ಮನದಲ್ಲಿದ್ದ ಕೊಳೆಯನ್ನೂ ಸಹ ತಮ್ಮ ವಚನಗಳ ಮೂಲಕ ತೊಳೆದ ಮಹಾನ್ ವ್ಯಕ್ತಿ’ ಎಂದು ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.</p>.<p>ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ತಮ್ಮ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಾಚಿದೇವರು ಬಸವಣ್ಣನವರ ಅನುವಾಯಿಯಾಗಿ ಆಗಿದ್ದರು. ಕಾಯಕವೇ ಕೈಲಾಸ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಹತ್ತಾರು ವಚನಗಳನ್ನು ಬರೆಯುವ ಮೂಲಕ ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.</p>.<p>ರಾಮಣ್ಣ ಜಿಡ್ಡಿಮನಿ, ಮಾತಾರ್ಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುಣಸಿಮರದ, ಖಾಸೀಂಸಾಬ್ ತೆಗ್ಗಿನಮನಿ, ಶಿವಪ್ಪ ಮಡಿವಾಳರ, ಮಲ್ಲೇಶಪ್ಪ ಮಡಿವಾಳರ, ಈರಮ್ಮ ಮಡಿವಾಳರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ:</strong> ‘12ನೇ ಶತಮಾನದ ಶಿವಶರಣ ಮಡಿವಾಳ ಮಾಚಿದೇವರು ಕೇವಲ ಮಲಿನ ಬಟ್ಟೆಗಳನ್ನಷ್ಟೆ ತೊಳೆಯಲಿಲ್ಲ. ಅದರೊಂದಿಗೆ ಜನರ ಮನದಲ್ಲಿದ್ದ ಕೊಳೆಯನ್ನೂ ಸಹ ತಮ್ಮ ವಚನಗಳ ಮೂಲಕ ತೊಳೆದ ಮಹಾನ್ ವ್ಯಕ್ತಿ’ ಎಂದು ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.</p>.<p>ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ತಮ್ಮ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಾಚಿದೇವರು ಬಸವಣ್ಣನವರ ಅನುವಾಯಿಯಾಗಿ ಆಗಿದ್ದರು. ಕಾಯಕವೇ ಕೈಲಾಸ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಹತ್ತಾರು ವಚನಗಳನ್ನು ಬರೆಯುವ ಮೂಲಕ ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.</p>.<p>ರಾಮಣ್ಣ ಜಿಡ್ಡಿಮನಿ, ಮಾತಾರ್ಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುಣಸಿಮರದ, ಖಾಸೀಂಸಾಬ್ ತೆಗ್ಗಿನಮನಿ, ಶಿವಪ್ಪ ಮಡಿವಾಳರ, ಮಲ್ಲೇಶಪ್ಪ ಮಡಿವಾಳರ, ಈರಮ್ಮ ಮಡಿವಾಳರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>