<p><strong>ನರೇಗಲ್:</strong> ಚುಟುಕು ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಸಣ್ಣ ಪ್ರಕಾರವಾಗಿದೆ. ಇದು ಚಿಕ್ಕದಾಗಿದ್ದರು ಸಹ ಅರ್ಥಗರ್ಭಿತವಾಗಿ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಂ. ಎಸ್. ಧಡೆಸೂರಮಠ ಹೇಳಿದರು.</p>.<p>ಪಟ್ಟಣ ಸಮೀಪದ ನಿಡಗುಂದಿ ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲ್ಲೂಕು ಘಟಕದ ವತಿಯಿಂದ ಈಚೆಗೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಈ ಸಾಹಿತ್ಯದಲ್ಲಿ ಕಡಿಮೆ ಸಾಲುಗಳಲ್ಲಿ ಹೆಚ್ಚು ವಿಷಯವಿರುತ್ತದೆ. ಸಾಮಾನ್ಯವಾಗಿ ಜೀವನ ಮೌಲ್ಯಗಳು, ನೀತಿಗಳು, ತತ್ವಗಳು, ವಿಡಂಬನೆ ಅಥವಾ ಹಾಸ್ಯವನ್ನು ಒಳಗೊಂಡಿರುತ್ತದೆ. ಅದರೊಳಗೆ ಉಪಮೆಯ, ರೂಪಕ, ದೃಷ್ಟಾಂತಗಳು ದಾರಿ ದೀಪವಾಗಿರುತ್ತವೆ ಎಂದರು. ಚುಟುಕು ಸಮಾಜಕ್ಕೊಂದು ಹೊಸ ಸಂದೇಶ ನೀಡುವ ಸಾಹಿತ್ಯ. ಈ ಸಾಹಿತ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಅದರಂಥ ಸಂತೋಷ ಬೇರೊಂದಿಲ್ಲ. ಇಡೀ ಸಮಾಜದ ಒಳ, ತಿರುಳನ್ನು ಕೇವಲ ನಾಲ್ಕೈದು ಸಾಲುಗಳಲ್ಲಿ ಅರ್ಥಗರ್ಭಿತವಾಗಿರುತ್ತದೆ ಎಂದರು.</p>.<p>ಮುಖಂಡ ವಿ. ಬಿ. ಸೋಮನಕಟ್ಟಿಮಠ ಮಾತನಾಡಿ, ಮಕ್ಕಳಿಗೆ ಚುಟುಕು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡು ಈ ಸಾಹಿತ್ಯದ ಅಭಿರುಚಿಯನ್ನು ತಿಳಿಸಬೇಕು. ಆಗ ತಾನಾಗಿಯೇ ಚುಟುಕು ಸಾಹಿತ್ಯ ಬೆಳೆಯುತ್ತದೆ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಶರಣಪ್ಪ ಅರಮನಿ ಮಾತನಾಡಿದರು. ಇಟಗಿ-ನಿಡಗುಂದಿಯ ಧರ್ಮರಮಠದ ಷಣ್ಮುಖಪ್ಪಜ್ಜನವರು ಸಾನಿಧ್ಯ ವಹಿಸಿದ್ದರು.</p>.<p>ಗಜೇಂದ್ರಗಡ ತಾಲ್ಲೂಕು ಅಧ್ಯಕ್ಷೆ ರೇಣುಕಾ ಏವೂರ್, ನಾಗರಾಜ ನಾಯಕ, ಶಂಕರ ಏವೂರ್, ದರ್ಶನ ಡುಮ್ಮನವರ, ಶರಣವ್ವ ಬೆಳದಡಿ, ನಾಗರತ್ನ, ಅನ್ನಪೂರ್ಣ ಜವಳಿಗೇರಿ, ರೋಶನ್ ಶಿರಗುಂಪಿ, ಪೂರ್ಣಿಮಾ, ಪ್ರೇಮ ಇಟಗಿ, ವಿರುಪಮ್ಮಾ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರೇಗಲ್:</strong> ಚುಟುಕು ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಸಣ್ಣ ಪ್ರಕಾರವಾಗಿದೆ. ಇದು ಚಿಕ್ಕದಾಗಿದ್ದರು ಸಹ ಅರ್ಥಗರ್ಭಿತವಾಗಿ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಂ. ಎಸ್. ಧಡೆಸೂರಮಠ ಹೇಳಿದರು.</p>.<p>ಪಟ್ಟಣ ಸಮೀಪದ ನಿಡಗುಂದಿ ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲ್ಲೂಕು ಘಟಕದ ವತಿಯಿಂದ ಈಚೆಗೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಈ ಸಾಹಿತ್ಯದಲ್ಲಿ ಕಡಿಮೆ ಸಾಲುಗಳಲ್ಲಿ ಹೆಚ್ಚು ವಿಷಯವಿರುತ್ತದೆ. ಸಾಮಾನ್ಯವಾಗಿ ಜೀವನ ಮೌಲ್ಯಗಳು, ನೀತಿಗಳು, ತತ್ವಗಳು, ವಿಡಂಬನೆ ಅಥವಾ ಹಾಸ್ಯವನ್ನು ಒಳಗೊಂಡಿರುತ್ತದೆ. ಅದರೊಳಗೆ ಉಪಮೆಯ, ರೂಪಕ, ದೃಷ್ಟಾಂತಗಳು ದಾರಿ ದೀಪವಾಗಿರುತ್ತವೆ ಎಂದರು. ಚುಟುಕು ಸಮಾಜಕ್ಕೊಂದು ಹೊಸ ಸಂದೇಶ ನೀಡುವ ಸಾಹಿತ್ಯ. ಈ ಸಾಹಿತ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಅದರಂಥ ಸಂತೋಷ ಬೇರೊಂದಿಲ್ಲ. ಇಡೀ ಸಮಾಜದ ಒಳ, ತಿರುಳನ್ನು ಕೇವಲ ನಾಲ್ಕೈದು ಸಾಲುಗಳಲ್ಲಿ ಅರ್ಥಗರ್ಭಿತವಾಗಿರುತ್ತದೆ ಎಂದರು.</p>.<p>ಮುಖಂಡ ವಿ. ಬಿ. ಸೋಮನಕಟ್ಟಿಮಠ ಮಾತನಾಡಿ, ಮಕ್ಕಳಿಗೆ ಚುಟುಕು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡು ಈ ಸಾಹಿತ್ಯದ ಅಭಿರುಚಿಯನ್ನು ತಿಳಿಸಬೇಕು. ಆಗ ತಾನಾಗಿಯೇ ಚುಟುಕು ಸಾಹಿತ್ಯ ಬೆಳೆಯುತ್ತದೆ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಶರಣಪ್ಪ ಅರಮನಿ ಮಾತನಾಡಿದರು. ಇಟಗಿ-ನಿಡಗುಂದಿಯ ಧರ್ಮರಮಠದ ಷಣ್ಮುಖಪ್ಪಜ್ಜನವರು ಸಾನಿಧ್ಯ ವಹಿಸಿದ್ದರು.</p>.<p>ಗಜೇಂದ್ರಗಡ ತಾಲ್ಲೂಕು ಅಧ್ಯಕ್ಷೆ ರೇಣುಕಾ ಏವೂರ್, ನಾಗರಾಜ ನಾಯಕ, ಶಂಕರ ಏವೂರ್, ದರ್ಶನ ಡುಮ್ಮನವರ, ಶರಣವ್ವ ಬೆಳದಡಿ, ನಾಗರತ್ನ, ಅನ್ನಪೂರ್ಣ ಜವಳಿಗೇರಿ, ರೋಶನ್ ಶಿರಗುಂಪಿ, ಪೂರ್ಣಿಮಾ, ಪ್ರೇಮ ಇಟಗಿ, ವಿರುಪಮ್ಮಾ ಹಿರೇಮಠ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>