‘ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕಳಲೆಯನ್ನು (ಎಳೆ ಬಿದಿರು) ಮಿತಿಗಿಂತ ಹೆಚ್ಚು ಸೇವಿಸಿದ್ದರಿಂದ ದೇಹದಲ್ಲಿ ಸಯನೋಜೆನಿಕ್ ಗ್ಲೈಕೋಸೈಡ್ ಸಂಗ್ರಹವಾಗಿ, ಆನೆ ಮೃತಪಟ್ಟಿದೆ ಎಂದು ವರದಿ ತಿಳಿಸಿದೆ. ಕರುಳಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಬಿಆರ್ಟಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ಕುಮಾರ್ ಹೇಳಿದ್ದಾರೆ.