<p><strong>ಲಕ್ಷ್ಮೇಶ್ವರ:</strong> ಸದ್ಯ ತಾಲ್ಲೂಕಿನಲ್ಲಿ ಎಲ್ಲೇ ನೋಡಿದರೂ ಮಾವಿನ ಮರಗಳಲ್ಲಿ ಹೂವಿನ ರಾಶಿಯೇ ಕಂಡು ಬರುತ್ತಿದೆ. ಮಹಿಳೆಯೊಬ್ಬಳು ತಲೆ ತುಂಬಾ ಹೂವು ಮುಡಿದಂತೆ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ.</p>.<p>ಪ್ರಸ್ತುತ ವರ್ಷ ಹೂ ಬಿಡಲು ಅನುಕೂಲಕರವಾದ ಚಳಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಗಿಡಗಳ ತುಂಬ ಹೂ ಗೊಂಚಲುಗಳು ಗಮನ ಸೆಳೆಯುತ್ತಿದ್ದು, ಬೆಳೆಗಾರರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದು ಸಹಜವಾಗಿ ಇದು ಸಮೃದ್ಧ ಫಲ ಬರುವ ಆಶಾಭಾವನೆ ಹೆಚ್ಚಿಸಿದೆ.</p>.<p>‘ಹವಾಮಾನದಲ್ಲಾದ ಬದಲಾವಣೆ, ಸಮಯಕ್ಕೆ ಸರಿಯಾದ ಮಳೆ ಹಾಗೂ ತಾಪಮಾನದ ಸಮತೋಲನವೇ ಈ ಅಪೂರ್ವ ಹೂವಿನ ಸಮೃದ್ಧತೆಗೆ ಕಾರಣ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಆರ್. ಕುಲಕರ್ಣಿ ತಿಳಿಸಿದ್ದಾರೆ.</p>.<p>ಮಾವಿನ ಹೂವು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ ಜೇನು ಹುಳುಗಳು, ಚಿಟ್ಟೆಗಳು ಸೇರಿದಂತೆ ಹಲವಾರು ಪರಾಗ ಜೀವಿಗಳನ್ನು ಆಕರ್ಷಿಸುತ್ತಿವೆ.</p>.<p>ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಅಂದಾಜು 70-80 ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಬಾಲೆಹೊಸೂರು, ರಾಮಗೇರಿ, ಸೂರಣಗಿ, ಶಿಗ್ಲಿ, ದೊಡ್ಡೂರು, ಗೋವನಾಳ, ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಾವಿನ ಕೃಷಿ ಇದೆ.</p>.<p>‘ಆರು ವರ್ಷಗಳ ಮರದಿಂದ 240 ಕಾಯಿ, ಎಂಟು ವರ್ಷದ ಮರದಿಂದ 300-500 ಮಾವಿನಕಾಯಿ ಇಳುವರಿ ನಿರೀಕ್ಷಿಸಬಹುದು. ಬೆಳೆಗಾರರು ಸೂಕ್ತ ಕಾಳಜಿ ವಹಿಸಿದರೆ ಮಾವಿನ ಕೃಷಿಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು ತಿಳಿಸಿದರು.</p>.<p>‘ಈ ವರ್ಷ ಮರದ ತುಂಬ ಹೂ ಬಿಟ್ಟಿದ್ದು ಇಳುವರಿ ಹೆಚ್ಚು ಬರುವ ಆಶಾಭಾವನೆ ಇದೆ’ ಎಂದು ತಾಲ್ಲೂಕಿನ ರಾಮಗೇರಿ ಗ್ರಾಮದ ಮಾವು ಬೆಳೆಗಾರ ಮಹೇಂದ್ರ ಬೆಟಗೇರಿ ಸಂತಸ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ:</strong> ಸದ್ಯ ತಾಲ್ಲೂಕಿನಲ್ಲಿ ಎಲ್ಲೇ ನೋಡಿದರೂ ಮಾವಿನ ಮರಗಳಲ್ಲಿ ಹೂವಿನ ರಾಶಿಯೇ ಕಂಡು ಬರುತ್ತಿದೆ. ಮಹಿಳೆಯೊಬ್ಬಳು ತಲೆ ತುಂಬಾ ಹೂವು ಮುಡಿದಂತೆ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ.</p>.<p>ಪ್ರಸ್ತುತ ವರ್ಷ ಹೂ ಬಿಡಲು ಅನುಕೂಲಕರವಾದ ಚಳಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಗಿಡಗಳ ತುಂಬ ಹೂ ಗೊಂಚಲುಗಳು ಗಮನ ಸೆಳೆಯುತ್ತಿದ್ದು, ಬೆಳೆಗಾರರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದು ಸಹಜವಾಗಿ ಇದು ಸಮೃದ್ಧ ಫಲ ಬರುವ ಆಶಾಭಾವನೆ ಹೆಚ್ಚಿಸಿದೆ.</p>.<p>‘ಹವಾಮಾನದಲ್ಲಾದ ಬದಲಾವಣೆ, ಸಮಯಕ್ಕೆ ಸರಿಯಾದ ಮಳೆ ಹಾಗೂ ತಾಪಮಾನದ ಸಮತೋಲನವೇ ಈ ಅಪೂರ್ವ ಹೂವಿನ ಸಮೃದ್ಧತೆಗೆ ಕಾರಣ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಆರ್. ಕುಲಕರ್ಣಿ ತಿಳಿಸಿದ್ದಾರೆ.</p>.<p>ಮಾವಿನ ಹೂವು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ ಜೇನು ಹುಳುಗಳು, ಚಿಟ್ಟೆಗಳು ಸೇರಿದಂತೆ ಹಲವಾರು ಪರಾಗ ಜೀವಿಗಳನ್ನು ಆಕರ್ಷಿಸುತ್ತಿವೆ.</p>.<p>ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಅಂದಾಜು 70-80 ಹೆಕ್ಟೇರ್ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಬಾಲೆಹೊಸೂರು, ರಾಮಗೇರಿ, ಸೂರಣಗಿ, ಶಿಗ್ಲಿ, ದೊಡ್ಡೂರು, ಗೋವನಾಳ, ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಾವಿನ ಕೃಷಿ ಇದೆ.</p>.<p>‘ಆರು ವರ್ಷಗಳ ಮರದಿಂದ 240 ಕಾಯಿ, ಎಂಟು ವರ್ಷದ ಮರದಿಂದ 300-500 ಮಾವಿನಕಾಯಿ ಇಳುವರಿ ನಿರೀಕ್ಷಿಸಬಹುದು. ಬೆಳೆಗಾರರು ಸೂಕ್ತ ಕಾಳಜಿ ವಹಿಸಿದರೆ ಮಾವಿನ ಕೃಷಿಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು ತಿಳಿಸಿದರು.</p>.<p>‘ಈ ವರ್ಷ ಮರದ ತುಂಬ ಹೂ ಬಿಟ್ಟಿದ್ದು ಇಳುವರಿ ಹೆಚ್ಚು ಬರುವ ಆಶಾಭಾವನೆ ಇದೆ’ ಎಂದು ತಾಲ್ಲೂಕಿನ ರಾಮಗೇರಿ ಗ್ರಾಮದ ಮಾವು ಬೆಳೆಗಾರ ಮಹೇಂದ್ರ ಬೆಟಗೇರಿ ಸಂತಸ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>