
ಕೊಳವೆ ಬಾವಿ ಕೆಟ್ಟು ಮೂರು ವರ್ಷವಾಗಿದೆ. ಸಾರಿಗೆ ಸಂಸ್ಥೆಯವರು ದುರಸ್ತಿ ಕಾರ್ಯ ಮಾಡುತ್ತಿಲ್ಲ. ನೀರಿನ ಪೂರೈಕೆ ಇಲ್ಲದೆ ಶೌಚಾಲಯ ಸ್ವಚ್ಛತೆ ಕಾಣುತ್ತಿಲ್ಲ. ಆವರಣದಲ್ಲಿನ ಗಿಡಗಳು ಒಣಗುತ್ತಿವೆ. ಈಗಿರುವ ಆಸನಗಳು ಕಡಿಮೆ ಇದ್ದು ಶಕ್ತಿ ಯೋಜನೆ ಜಾರಿ ಆದಾಗಿನಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ ಸಮಪರ್ಕಕ ಆಸನಗಳ ವ್ಯವಸ್ಥೆ ಮಾಡಬೇಕುಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು.
ಮಂಜು ಕುಂಬಾರ, ಯುವ ಮುಖಂಡ.
ನಿಲ್ಧಾಣದ ಒಳಗೆ ವಿದ್ಯುತ್ ಬಲ್ಬ್ಗಳು ಹಾಳಾಗಿ ವರ್ಷವೇ ಆಗಿದ್ದು ರಿಪೇರಿ ಕೆಲಸ ನಡೆದಿಲ್ಲ. ಹೊಸ ಬಲ್ಬ್ ಅಳವಡಿಕೆ ಕೊಳವೆಬಾವಿ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿಕೊಟ್ಟರು ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ
ಬಸವರಾಜ ಕರಿಗಾರ, ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ
ನಿಲ್ಧಾಣದಲ್ಲಿನ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಸಮಸ್ಯೆ ವಿದ್ಯುತ್ ಬಲ್ಬ್ ಅಳವಡಿಕೆ ಶೌಚಾಲಯಗಳ ದುರಸ್ತಿ ಕಾರ್ಯಕ್ಕೆ ಕೂಡಲೇ ಸೂಚಿಸಲಾಗುವುದು
ಮಾರ್ತಾಂಡಪ್ಪ ಸುಂಕದ, ಪ್ರಭಾರಿ ಎಇಇ, ಸಾರಿಗೆ ಸಂಸ್ಥೆ ಗದಗ ವಿಭಾಗಮುಳಗುಂದ ಬಸ್ ನಿಲ್ಧಾಣ ಮೂತ್ರಾಲಯದ ಕಮೋಡ್ ಗಳ ಪೈಪ್ ಒಡೆದಿರುವುದು
ನಿಲ್ಧಾಣದಲ್ಲಿ ಆಸನಗಳಿಲ್ಲ ಹೀಗಾಗಿ ಬಸ್ ಗಾಗಿ ಹೊರಗೆ ನೆಲದ ಮೇಲೆ ಕುಳಿತ ಪ್ರಯಾಣಿಕರು
ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮಧ್ಯೆ ಕೊಳವೆ ಬಾವಿ ಮುಚ್ಚಿರುವುದು
ನಿಲ್ಧಾಣದ ನಿಯಂತ್ರಣಾಧಿಕಾರಿ ಕುಳಿತುಕೊಳ್ಳಲು ಖುರ್ಚಿ ಇಲ್ಲದೆ ಹರಿದ ಸಿಟ್ ಬಳಸಿರುವುದು