ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮುಳಗುಂದ| ಕಳಪೆ ಕಾಮಗಾರಿ; ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ

ಮುಳಗುಂದ ಪಟ್ಟಣ ಪಂಚಾಯಿತಿಯ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳು
ಚಂದ್ರಶೇಖರ್ ಭಜಂತ್ರಿ
Published : 29 ಸೆಪ್ಟೆಂಬರ್ 2025, 6:45 IST
Last Updated : 29 ಸೆಪ್ಟೆಂಬರ್ 2025, 6:45 IST
ಫಾಲೋ ಮಾಡಿ
Comments
ಪಟ್ಟಣದ ಮುಖ್ಯರಸ್ತೆ ಡಾಂಬರೀಕರಣ ಮಾಡಿದ ನಂತರ ಫುಟ್‌ಪಾತ್‌ ಮೇಲೆ ಮಳೆ ನೀರು ನಿಲ್ಲುತ್ತಿದೆ
ಪಟ್ಟಣದ ಮುಖ್ಯರಸ್ತೆ ಡಾಂಬರೀಕರಣ ಮಾಡಿದ ನಂತರ ಫುಟ್‌ಪಾತ್‌ ಮೇಲೆ ಮಳೆ ನೀರು ನಿಲ್ಲುತ್ತಿದೆ
ಮುಳಗುಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸಾಪೂರ ಗ್ರಾಮದಲ್ಲಿ ಎಸ್ಎಫ್‌ಸಿ ಅನುದಾನದಲ್ಲಿ ನಿರ್ಮಿಸಿದ ಸಿಡಿ ಕುಸಿದಿರುವದು
ಮುಳಗುಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸಾಪೂರ ಗ್ರಾಮದಲ್ಲಿ ಎಸ್ಎಫ್‌ಸಿ ಅನುದಾನದಲ್ಲಿ ನಿರ್ಮಿಸಿದ ಸಿಡಿ ಕುಸಿದಿರುವದು
ಮುಳಗುಂದ ಅಶ್ವಿನಿ ನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಸಂಪರ್ಕ ಮಾಡದಿರುವುದು
ಮುಳಗುಂದ ಅಶ್ವಿನಿ ನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಸಂಪರ್ಕ ಮಾಡದಿರುವುದು
ಮಹ್ಮದಲಿ ಶೇಖ ರೈತರು
ಮಹ್ಮದಲಿ ಶೇಖ ರೈತರು
ಎಂ.ಎಸ್.ಕಣವಿ
ಎಂ.ಎಸ್.ಕಣವಿ
ಕೃಷ್ಣಪ್ಪ ಜಾಧವ ಅಶ್ವಿನಿ ನಗರದ ನಿವಾಸಿ
ಕೃಷ್ಣಪ್ಪ ಜಾಧವ ಅಶ್ವಿನಿ ನಗರದ ನಿವಾಸಿ
ಮಹಾಂತೇಶ ಎಚ್.ಕಣವಿ
ಮಹಾಂತೇಶ ಎಚ್.ಕಣವಿ
ಕೃಷ್ಣ ಹಾದಿಮನಿ
ಕೃಷ್ಣ ಹಾದಿಮನಿ
ಬಸಾಪೂರದಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ಈಗಾಗಲೆ ನೋಟಿಸ್ ನೀಡಲಾಗಿದೆ. ಮತ್ತೊಮ್ಮೆ ಸಿಡಿ ತೆಗೆದು ಕಾಮಗಾರಿ ಮಾಡುವಂತೆ ತಿಳಿಸಲಾಗಿದೆ. ಇನ್ನುಳಿದ ಭಾಗಗಳಲ್ಲಿ ನಡೆದ ಕಾಮಗಾರಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಕೃಷ್ಣ ಹಾದಿಮನಿ ಪ್ರಭಾರ ಮುಖ್ಯಾಧಿಕಾರಿ ಮುಳಗುಂದ ಪಟ್ಟಣ ಪಂಚಾಯಿತಿ
ಯಾರು ಏನಂತಾರೆ?
ರೈತರಿಗೆ ಸಮಸ್ಯೆ ಬಸಾಪೂರ ಗ್ರಾಮದಲ್ಲಿ ಹೊಲಕ್ಕೆ ಶೀತಾಲಹರಿ ದಾರಿಗೆ ಕಳೆದ ಮಾರ್ಚ್‌ನಲ್ಲಿ ಚರಂಡಿ ಮತ್ತು ಸಿಡಿ ನಿರ್ಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಸಿಡಿ ಕುಸಿದಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಗುಣಮಟ್ಟದ ಕೆಲಸ ನಿರ್ವಹಿಸಿ ಎಂದು ಮನವಿ ಮಾಡಿತ್ತು. ಆದರೆ ಪಂಚಾಯಿತಿಯವರು ಈ ಬಗ್ಗೆ ಕ್ರಮ ವಹಿಸಿಲ್ಲ. ಇದರ ಪರಿಣಾಮ ರೈತರಿಗೆ ಸಮಸ್ಯೆ ಉಂಟಾಗಿದೆ. ಮಹ್ಮದಲಿ ಶೇಖ, ರೈತ
ಪಂ.ಪಂಚಾಯ್ತಿಯೇ ಕಾರಣ
ಎರಡು ಮೂರು ವರ್ಷಗಳಿಂದ ಪಟ್ಟಣ ಪಂಚಾಯಿತಿ ವಿವಿಧ ಯೋಜನೆಗಳ ಅಡಿ ಕೈಗೊಂಡ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಪಟ್ಟಣದಲ್ಲಿ ಕಾಮಗಾರಿ ಮಾಡಿದ ನಂತರವೂ ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪುತ್ತಿಲ್ಲ. ಇದಕ್ಕೆ ಮುಖ್ಯಾಧಿಕಾರಿ, ಎಂಜನಿಯರ್‌ಗಳೇ ಕಾರಣ. ಎಂ.ಎಸ್.ಕಣವಿ, ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ‌
ಮನವಿಗೆ ಸ್ಪಂದನೆ ಇಲ್ಲ
ನಮ್ಮ ಮನೆ ಮುಂದೆ ಇರುವ ನೀರಿನ ಟ್ಯಾಂಕ್ ನಿರ್ಮಿಸಿ ಮೂರು ವರ್ಷಗಳೇ ಆಗಿವೆ. ಆದರೆ ಈವರೆಗೂ ನೀರು ತುಂಬಿಸಿಲ್ಲ. ಇದಕ್ಕೆ ಅಳವಡಿಸಿದ ಪೈಪ್‌ ಸಹ ಕಿತ್ತು ಹೋಗಿದೆ. ಸಂಬಂಧಿಸಿದ ಮುಖ್ಯಾಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕೃಷ್ಣಪ್ಪ ಜಾಧವ, ಅಶ್ವಿನಿ ನಗರ ನಿವಾಸಿ
ಪಂಚಾಯಿತಿಯಿಂದ ನಿರ್ಲಕ್ಷ್ಯ
ಉದ್ದೇಶದಿಂದ ಕೈಗೊಂಡ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳಾದರೂ ಈವರೆಗೆ ಕಂಬಗಳಗೆ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಿಲ್ಲ. ಈ ಮಾರ್ಗದಲ್ಲಿ ವಸತಿ ಶಾಲೆ, ಕಾಲೇಜುಗಳಿದ್ದು ರಾತ್ರಿ ವೇಳೆ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಈ ಹಿಂದೆ ಹಲವು ಭಾರಿ ಮನವಿ ಮಾಡಿದ್ರು ಪಂಚಾಯತಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಮಹಾಂತೇಶ ಎಚ್.ಕಣವಿ, ಜೆಡಿಎಸ್ ಸ್ಥಳಿಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT