ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಬಸವರಾಜ ಬೊಮ್ಮಾಯಿ

Published : 20 ಏಪ್ರಿಲ್ 2024, 16:20 IST
Last Updated : 20 ಏಪ್ರಿಲ್ 2024, 16:20 IST
ಫಾಲೋ ಮಾಡಿ
Comments
ಜನತಾ ಸಂವಾದ ನನಗೆ ಕಣ್ಣು ತೆರೆಸಿದ ಕಾರ್ಯಕ್ರಮ. ಸಕಾರಾತ್ಮಕ ಚರ್ಚೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳನ್ನು ಚುನಾವಣಾ ಪೂರ್ವದಲ್ಲೇ ಅರಿಯುವ ಅವಕಾಶ ಕಲ್ಪಿಸಿದ ಪ್ರಗತಿಪರ ಚಿಂತಕ ಅನಿಲ್‌ ಮೆಣಸಿನಕಾಯಿ ಅವರಿಗೆ ಅಭಿನಂದನೆ ಸಲ್ಲಿಸುವೆ
ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ
ಆಡಳಿತದಲ್ಲಿ ದೂರದೃಷ್ಟಿತ್ವ ಪ್ರಾಮಾಣಿಕತೆ ಮನೋಭಾವ ಹೊಂದಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಲು ಗದಗ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಶಕ್ತಿ ತುಂಬಲಾಗುವುದು. ಗದಗ ಕ್ಷೇತ್ರದ ಬದಲಾವಣೆಗೆ ಅವರು ಮುನ್ನುಡಿ ಬರೆಯಲಿದ್ದಾರೆ
ಅನಿಲ್‌ ಮೆಣಸಿನಕಾಯಿ ಬಿಜೆಪಿ ಮುಖಂಡ
ಜನತಾ ಸಂವಾದ ಎಂಬುದು ವಿನೂತನ ಕಾರ್ಯಕ್ರಮ. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಜನರು ಗಮನ ಸೆಳೆದಿದ್ದಾರೆ. ಅವುಗಳನ್ನು ಈಡೇರಿಸಲು ಬಸವರಾಜ ಬೊಮ್ಮಾಯಿ ಅವರನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕಿದೆ
ಸಿ.ಸಿ.ಪಾಟೀಲ ನರಗುಂದ ಶಾಸಕ
‘ನೇಕಾರರ ಹಬ್‌ ಮಾಡಲು ಪ್ರಯತ್ನ’
‘ಬೆಟಗೇರಿಯನ್ನು ನೇಕಾರರ ಹಬ್ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬೊಮ್ಮಾಯಿ ಭರವಸೆ ನೀಡಿದರು. ‘ನೇಕಾರರು ತಮ್ಮ ಉದ್ಯಮದಲ್ಲಿ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಹ್ಯಾಂಡ್ ಲೂಮ್ ಮಾದರಿಯಲ್ಲಿ ಪವರ್ ಲೂಮ್ ನೇಕಾರರಿಗೆ ಸವಲತ್ತುಗಳನ್ನು ನೀಡಲಾಯಿತು. ನೇಕಾರ ಸಮ್ಮಾನ್‌ ಯೋಜನೆ 50 ಯುನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ಮಾದರಿಯಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು. ನಾನು ಸಿ.ಎಂ ಆಗಿದ್ದಾಗ ನೇಕಾರರ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇ; ಈಗಿನ ಸರ್ಕಾರ ನಿಲ್ಲಿಸಿದೆ’ ಎಂದು ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT