ರೋಣ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸಿದ ಹಾಗೂ ಕಾರು ಚಾಲಕರ ಸೀಟ್ ಬೆಲ್ಟ್ ಹಾಕಿಕೊಂಡು ಹೋಗುತ್ತಿರುವವರನ್ನು ತಡೆದು ರೋಣ ಪಿಎಸ್ಐ ಎಲ್.ಕೆ.ಜೂಲಕಟ್ಟಿ ಗುಲಾಬಿ ಹೂ ನೀಡಿ ಅಭಿನಂದನೆ ತಿಳಿಸಿದರು.
ನಂತರ ಮಾತನಾಡಿದ ಅವರು, ‘ಪ್ರತಿಯೊಬ್ಬರ ಜೀವ ಬೆಲೆ ಕಟ್ಟಲಾಗದು, ರಸ್ತೆ ನಿಯಮ ಪಾಲಿಸಿ ಜೀವದ ರಕ್ಷಣೆ ಮಾಡಿಕೊಳ್ಳಿ’ ಎಂದು ಹೇಳಿದರು.
‘ನಿಮ್ಮ ರಕ್ಷಣೆ ನಿಮ್ಮ ಕುಟುಂಬದ ರಕ್ಷಣೆ ಇದ್ದಂತೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ನಿಯಮ ಮೀರಿ ನಡಯಬೇಡಿ’ ಎಂದು ತಿಳಿಸಿದರು.
ಹೂ ನೀಡಿ ಸವಾರರಿಗೆ ಸುರಕ್ಷತಾ ನಿಯಮದ ಬಗ್ಗೆ ತಿಳಿಸಿಕೊಡುವ ಪಿಎಸ್ಐ ಜೂಲಕಟ್ಟಿ ಅವರ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ.