ಸಂಕ್ರಾತಿಯ ಪ್ರಯುಕ್ತ ನೂರಾರು ಭಕ್ತರು ಸಮೀಪದ ವರವಿ ಮೌನೇಶ್ವರನ ಅಂಬಲಿ ಹೊಂಡದಲ್ಲಿ ಹಾಗೂ ತಾಲ್ಲೂಕಿನ ಸಾಸಲವಾಡ ಗ್ರಾಮದ ಪೂರ್ವಕ್ಕೆ ತುಂಗಾಭದ್ರ ನದಿ ಹರಿಯುತ್ತಿದ್ದು, ನದಿಯ ಮಧ್ಯ ಇರುವ ಗಡ್ಡಿ ಬಸವೇಶ್ವರ ಹಾಗೂ
ವೀರಭದ್ರೇಶ್ವರ ದೇವಸ್ಥಾನಗಳಿದ್ದು, ಸಂಕ್ರಾಂತಿ ದಿನದಂದು ರಾಜ್ಯದ ಬಳ್ಳಾರಿ, ದಾವಣಗೆರಿ, ಹಾವೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡುವುದಕ್ಕೆ ಬರುವುದು ವಿಶೇಷ.