ದಲಿತ ಮುಖಂಡ ಎಸ್.ಎನ್.ಬಳ್ಳಾರಿ ಮಾತನಾಡಿ, ‘ಬಿಟ್ಟಿ ಚಾಕ್ರಿ ಬಹಳ ಕೆಟ್ಟದ್ದು. ಹಿಡಿ ಜೋಳ ಕೊಟ್ಟು ಜೀವನಪೂರ್ತಿ ದುಡಿಸಿಕೊಳ್ಳುವುದು ಅಮಾನವೀಯ. ಹಿಂದೆ ಜೀತಗಾರರ ಮಕ್ಕಳು ಕೂಡ ಜೀತಗಾರರೇ ಆಗುತ್ತಿದ್ದರು. ಇಂತಹ ಶೋಷಣೆಗೆ ಒಳಗಾದವರಲ್ಲಿ ಹೆಚ್ಚಿನವರು ಪರಿಶಿಷ್ಟರು, ತಳಸಮುದಾಯದ ಜನರು. ಈಗ ಕಾಲ ಬದಲಾಗಿದೆ. ಎಲ್ಲರೂ ಶಿಕ್ಷಣ ಪಡೆಯುವ ಮೂಲಕ ಬದುಕಿನಲ್ಲಿ ಬದಲಾವಣೆ ಕಾಣಬೇಕು. ಅಂಬೇಡ್ಕರ್ ತತ್ವಾದರ್ಶಗಳ ಮೂಲಕ ಬದುಕು ಬೆಳಕಾಗಿಸಿಕೊಳ್ಳಬೇಕು’ ಎಂದು ಹೇಳಿದರು.