<p><strong>ಮುಂಡರಗಿ</strong>: ‘ದಾನ ಮಾಡುವುದು ಸತ್ಕಾರ್ಯವಾಗಿದ್ದು, ಸಮಾಜದಲ್ಲಿ ಸಾವಿರಾರು ಕುಟುಂಬಗಳು ದಾನಿಗಳು ನೀಡುವ ದೇಣಿಗೆಯನ್ನು ಅವಲಂಬಿಸಿವೆ. ನಾವೆಲ್ಲ ಪ್ರತಿವರ್ಷ ನಮ್ಮ ದುಡಿಮೆಯ ಶೇ 35ರಷ್ಟು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿಡಬೇಕು’ ಎಂದು ನಿವೃತ್ತ ಡಿಡಿಪಿಐ ಎಂ.ಎ.ರಡ್ಡೇರ ತಿಳಿಸಿದರು.</p>.<p>ರಡ್ಡಿ ಬಳಗವು ಪಟ್ಟಣದ ಬೃಂದಾವನ ವೃತ್ತದಲ್ಲಿರುವ ವೆಂಕಟೇಶ್ವರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.</p>.<p>‘ನಮ್ಮ ನಾಡಿನಲ್ಲಿ ಬಾಳಿಹೋದ ಶರಣರು, ಸಂತರು, ಮಹಾತ್ಮರು ನಾವು ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿದ್ದಾರೆ. ಕುಟುಂಬವನ್ನು ನಿರ್ವಹಿಸುವ, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ, ದಾನ ಮಾಡುವ ಬಗೆಯನ್ನು ಶರಣೆ ಹೇಮರಡ್ಡಿ ಮಲ್ಲಮ್ಮ ತಿಳಿಸಿಕೊಟ್ಟಿದ್ದಾರೆ’ ಎಂದರು.</p>.<p>ಭೂಮಿಕಾ ರಾಜೂರ ಮಾತನಾಡಿ, ‘ವಿಶೇಷ ಸಾಧನೆ ಮಾಡಿದ ಮಹನೀಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿ. ಇದು ಇತರರಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ತಿಳಿಸಿದರು.</p>.<p>ಅಭಿಷೇಕ ಶೀರನಹಳ್ಳಿ, ಲಕ್ಷ್ಮಿ ಮಂಟಗಣಿ, ಶಿಲ್ಪಾ ಚನ್ನಳ್ಳಿ, ಅರುಣಾ ಶೀರನಹಳ್ಳಿ, ಸಂಗೀತಾ ಕಬ್ಬೇರಹಳ್ಳಿ, ಪೃಥ್ವಿ ಕಬ್ಬೇರಹಳ್ಳಿ, ಆದರ್ಶ ಮಾಲಿಪಾಟೀಲ, ಸಂಕಲ್ಪ ಪಾಟೀಲ, ಶಾಂತಾ ಇಮ್ರಾಪೂರ ಅವರನ್ನು ಸನ್ಮಾನಿಸಲಾಯಿತು.</p>.<p>ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್.ಗಡ್ಡದ, ಶಿಕ್ಷಕ ಎಸ್.ಕೆ.ರಾಜೂರ, ರಾಜ್ಯ ರಡ್ಡಿ ಸಮಾಜದ ಉಪಾಧ್ಯಕ್ಷ ಕೆ.ವಿ.ಹಂಚಿನಾಳ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ</strong>: ‘ದಾನ ಮಾಡುವುದು ಸತ್ಕಾರ್ಯವಾಗಿದ್ದು, ಸಮಾಜದಲ್ಲಿ ಸಾವಿರಾರು ಕುಟುಂಬಗಳು ದಾನಿಗಳು ನೀಡುವ ದೇಣಿಗೆಯನ್ನು ಅವಲಂಬಿಸಿವೆ. ನಾವೆಲ್ಲ ಪ್ರತಿವರ್ಷ ನಮ್ಮ ದುಡಿಮೆಯ ಶೇ 35ರಷ್ಟು ಭಾಗವನ್ನು ದಾನ, ಧರ್ಮಕ್ಕೆ ಮೀಸಲಿಡಬೇಕು’ ಎಂದು ನಿವೃತ್ತ ಡಿಡಿಪಿಐ ಎಂ.ಎ.ರಡ್ಡೇರ ತಿಳಿಸಿದರು.</p>.<p>ರಡ್ಡಿ ಬಳಗವು ಪಟ್ಟಣದ ಬೃಂದಾವನ ವೃತ್ತದಲ್ಲಿರುವ ವೆಂಕಟೇಶ್ವರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.</p>.<p>‘ನಮ್ಮ ನಾಡಿನಲ್ಲಿ ಬಾಳಿಹೋದ ಶರಣರು, ಸಂತರು, ಮಹಾತ್ಮರು ನಾವು ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿದ್ದಾರೆ. ಕುಟುಂಬವನ್ನು ನಿರ್ವಹಿಸುವ, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ, ದಾನ ಮಾಡುವ ಬಗೆಯನ್ನು ಶರಣೆ ಹೇಮರಡ್ಡಿ ಮಲ್ಲಮ್ಮ ತಿಳಿಸಿಕೊಟ್ಟಿದ್ದಾರೆ’ ಎಂದರು.</p>.<p>ಭೂಮಿಕಾ ರಾಜೂರ ಮಾತನಾಡಿ, ‘ವಿಶೇಷ ಸಾಧನೆ ಮಾಡಿದ ಮಹನೀಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿ. ಇದು ಇತರರಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ತಿಳಿಸಿದರು.</p>.<p>ಅಭಿಷೇಕ ಶೀರನಹಳ್ಳಿ, ಲಕ್ಷ್ಮಿ ಮಂಟಗಣಿ, ಶಿಲ್ಪಾ ಚನ್ನಳ್ಳಿ, ಅರುಣಾ ಶೀರನಹಳ್ಳಿ, ಸಂಗೀತಾ ಕಬ್ಬೇರಹಳ್ಳಿ, ಪೃಥ್ವಿ ಕಬ್ಬೇರಹಳ್ಳಿ, ಆದರ್ಶ ಮಾಲಿಪಾಟೀಲ, ಸಂಕಲ್ಪ ಪಾಟೀಲ, ಶಾಂತಾ ಇಮ್ರಾಪೂರ ಅವರನ್ನು ಸನ್ಮಾನಿಸಲಾಯಿತು.</p>.<p>ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್.ಗಡ್ಡದ, ಶಿಕ್ಷಕ ಎಸ್.ಕೆ.ರಾಜೂರ, ರಾಜ್ಯ ರಡ್ಡಿ ಸಮಾಜದ ಉಪಾಧ್ಯಕ್ಷ ಕೆ.ವಿ.ಹಂಚಿನಾಳ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>