‘ವೈದ್ಯರು ಸ್ಕ್ಯಾನಿಂಗ್ ವರದಿ ನೋಡಿದಾಗ ಮಗುವಿಗೆ ಕರುಳಿನ ತೊಂದರೆ (ಇಂಟ್ಯುಸಸ್ಸಾಪ್ಶನ್) ಇರುವುದು ಗೊತ್ತಾಗಿದೆ. ತುರ್ತು ಚಿಕಿತ್ಸೆ ನಡೆಸದಿದ್ದರೆ ಕರುಳಿನ ಗ್ಯಾಂಗ್ರೀನ್ ಆಗುವ ಸಂಭವವಿತ್ತು. ಪ್ರಥಮ ಚಿಕಿತ್ಸೆಯ ನಂತರ ಡಾ. ವಿನಯಕುಮಾರ ತೇರದಾಳ (ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು), ಡಾ. ಜ್ಯೋತಿ ಕರೆಗೌಡರ್ (ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು), ಡಾ. ಜಮೀರ್ (ಅರವಳಿಕೆ ತಜ್ಞ), ಡಾ. ವಿನಾಯಕ, ಡಾ. ಪ್ರಿಯಾ ಅವರ ತಂಡ ಮಗುವಿಗೆ ಉದರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಮಗು ಚೇತರಿಕೆ ಕಾಣುತ್ತಿದ್ದು ಆರೋಗ್ಯದಿಂದಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಿದ್ದತೆ ನಡೆಸಲಾಗಿದೆ’ ಎಂದು ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.