ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ‘ಎಸ್ಟಿ ಮೀಸಲಾತಿಗಾಗಿ ಕುರುಬರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವವರ ಪ್ರಸಾದಕ್ಕಾಗಿ ಗದುಗಿನಿಂದ 50 ಸಾವಿರ ರೊಟ್ಟಿಗಳು ಬೆಂಗಳೂರಿಗೆ ಹೋಗಲಿವೆ. ಎಸ್ಟಿಗೆ ಸೇರಿಸುವಂತೆ ಕುರುಬರ ಈ ಹೋರಾಟ ಹೊಸದಲ್ಲ. ಈ ಬಗ್ಗೆ ಹಿಂದೆ ದೇವರಾಜ ಅರಸು ಅವರ ಮೂಲಕ ಕೇಂದ್ರಕ್ಕೆ ಶಿಫಾರಸು ಹೋಗಿತ್ತು. ಆದರೆ, ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಇದು ಆಗಲಿಲ್ಲ’ ಎಂದರು.