ರಸ್ತೆ, ಸೇತುವೆ ಅಭಿವೃದ್ಧಿ ಪಡಿಸಲು ಒತ್ತಾಯ: ತೆಗ್ಗಿನಭಾವನೂರ ಗ್ರಾಮದಿಂದ ಚಿಕ್ಕವಡ್ಡಟಿ, ನವೆಭಾವನೂರ, ಹೂಸಳ್ಳಿ ಗ್ರಾಮ ಸೇರಿದಂತೆ 7 ಹಳ್ಳಿಗಳು ಹಾಗೂ ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಕೇಸರು ಗದ್ದೆಯಂತಾಗುತ್ತದೆ, ಮಾರ್ಗ ಮಧ್ಯೆದಲ್ಲಿರುವ ಸೇತುವೆಯೂ ತಳಭಾಗದಲ್ಲಿ ಇರುವುದರಿಂದ ಮಳೆಗಾಲದಲ್ಲಿ ನೀರು ಸೇತುವೆ ಮೇಲೆ ಹರಿಯುತ್ತದೆ, ಇದರಿಂದ ರೈತರು, ಹಳ್ಳಿ ಜನರು ಆಕಡೆಯಿಂದ ಈ ಕಡೆ ಬರಲು ದಿನಗಟ್ಟಲೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ನೀಡಿದರು ಯಾವ ಪ್ರಯೋಜನವಾಗಿಲ್ಲ. ಆದ್ದರಿಂದ ಶೀಘ್ರದಲ್ಲೇ ರಸ್ತೆ ಮತ್ತು ಸೇತುವೆಯನ್ನು ಅಭಿವೃದ್ಧಿ ಪಡಿಸಿ ಗ್ರಾಮಸ್ಥರು ತಹಶೀಲ್ದಾರ್ ಕಲಗೌಡ ಪಾಟೀಲ್ ಅವರ ಮುಂದೆ ಅವಲತ್ತುಕೊಂಡರು.