ಪಟ್ಟಣದ ದಂಡಾಪೂರ, ದೇಸಾಯಿಭಾವಿ ಓಣಿ, ಅರ್ಭಾಣ ಓಣಿಯ ನಳಗಳಿಗೆ ಕಲುಷಿತ ನೀರು ಪೂರೈಕೆಯಾಗಿದ್ದು, ಇದನ್ನು ಕುಡಿದ ಜನರು ವಾಂತಿ, ಭೇದಿಯಿಂದ ಬಳಲಿದರು. ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳನ್ನು ದಾಖಲಿಸಿಕೊಂಡು ಚಕಿತ್ಸೆ ನೀಡಲಾಗುತ್ತಿದೆ, ಇನ್ನುಳಿದವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದರು.