<p><strong>ಗದಗ:</strong> ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಎಸ್ಬಿಐ ಫೌಂಡೇಷನ್ ಸಹಯೋಗದಲ್ಲಿ ಇಲ್ಲಿನ ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿನ 14 ಎಕರೆ ಜಾಗದಲ್ಲಿ ರೂಪಿಸಿದ್ದ ಜನ–ವನ ಯೋಜನೆ ಯಶ ಕಂಡಿದ್ದು, 19,200 ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ.</p>.<p>ಮೂರು ವರ್ಷಗಳ ಹಿಂದೆ ಕೇವಲ ಗುಡ್ಡವಾಗಿದ್ದ ಈ ಜಾಗದಲ್ಲಿ ಆಲದ ಮರ, ಬೇವು, ಹುಣಸೆ, ಸಿಮರುಬಾ,ತಾಪ್ಸಿ, ತಬುಬಿಯಾ, ಬಂಗಾಳಿ, ಗಾಳಿ ಮರ, ಪೇರಲ, ಸೀತಾಫಲ, ನೇರಳೆ, ಅರಳಿ ಮರ, ಅತ್ತಿ ಮರ, ಹೊಂಗೆ ಮರ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಇಲ್ಲಿ ನೆಡಲಾಗಿತ್ತು.</p>.<p>ಗಿಡ ನೆಡುವುದರ ಜತೆಗೆ ಅವುಗಳ ಕಾಳಜಿಯನ್ನು ಜತನದಿಂದ ಮಾಡಿದ್ದರಿಂದ ಎಲ್ಲ ಗಿಡಗಳು ಉಳಿದುಕೊಂಡು, ಚೆನ್ನಾಗಿ ಬೆಳೆದು ಹಸಿರಿನ ನಗು ತುಳುಕಿಸುತ್ತಿವೆ. ಗಿಡಗಳನ್ನು ಬೆಂಕಿಯಿಂದ ಅವಘಡದಿಂದ ತಪ್ಪಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಟ್ರಂಚ್ ನಿರ್ಮಾಣ ಮಾಡಲಾಗಿದೆ.</p>.<p>ಇಲ್ಲಿ ನೆಟ್ಟಿರುವ ಗಿಡಗಳಿಗೆ ನೀರಿನ ನಿರಂತರ ಪೂರೈಕೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೊಳವೆಬಾವಿಗೆ ಟ್ವಿನ್ ರಿಂಗ್ ರೀಚಾರ್ಜ್ ವಿಧಾನ ಅಳವಡಿಸಲಾಗಿದೆ. ಇದರಿಂದ ಬೇಸಿಗೆ ಕಾಲದಲ್ಲಿಯೂ ಗಿಡಗಳಿಗೆ ನೀರಿನ ಕೊರತೆಯಾಗದಂತೆ ಪ್ರತಿಯೊಂದು ಗಿಡಕ್ಕೂ ನೀರಿನ ಪೂರೈಕೆ ಆಗುವಂತೆ ಯೋಜಿಸಲಾಗಿದೆ.</p>.<p>ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಕಾಡಿದಾಗ ಹೊರಗಿನಿಂದ ಟ್ಯಾಂಕರ್ಗಳ ಮೂಲ ನೀರು ತಂದು ಪ್ರತಿಯೊಂದು ಗಿಡಕ್ಕೂ ನೀರು ಉಣಿಸಲಾಗಿದೆ. ಇದರಿಂದಾಗಿ ಗಿಡಗಳು ಫಲವತ್ತಾಗಿ ಬೆಳೆದು 14 ಎಕರೆ ಪ್ರದೇಶ ಹಚ್ಚ ಹಸಿರಾಗಿದೆ. ಮೈಮನಗಳಿಗೆ ಮುದ ನೀಡುತ್ತಿದೆ.</p>.<p>ಜನ ವನದಲ್ಲಿ ಗಿಡಗಳನ್ನು ಬೆಳೆಸುವುದರ ಜತೆಗೆ ಉದ್ಯಾನದಂತೆ ಜನರಿಗೆ ಅನುಕೂಲ ಕಲ್ಪಿಸುವ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.</p>.<p>ಸಾರ್ವಜನಿಕರು ಕುಳಿತುಕೊಳ್ಳಲು ಚೆಂಚ್ ವ್ಯವಸ್ಥೆ, ಓಪನ್ ಜಿಮ್, ಬಯಲು ಸಭೆ ನಡೆಸಲು ಸ್ಥಳ ನಿರ್ಮಿಸಲಾಗಿದೆ. ಸೋಲಾರ್ ಲೈಟ್ ಅಳವಡಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹಗಲಿನಂತೆ ರಾತ್ರಿ ವೇಳೆಯಲ್ಲೂ ಜನವನದ ಹಸಿರು ಸೌಂದರ್ಯ ಆಸ್ವಾದಿಸಲು ಇದು ನೆರವಾಗಿದೆ.</p>.<p>ಇಲ್ಲಿರುವ ಓಪನ್ ಮೀಟಿಂಗ್ ಜಾಗದಲ್ಲಿ ಸಾರ್ವಜನಿಕರು ಜನ್ಮದಿನಾಚರಣೆ, ಸಾಂಸ್ಕೃತಿಕ ಸಂಭ್ರಮದಂತಹ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ.</p>.<div><blockquote>ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಹಸಿರಿನ ಸಂರಕ್ಷಣೆ ಸ್ವಚ್ಛತೆ ಎಲ್ಲವನ್ನೂ ಬದ್ಧತೆಯಿಂದ ನಿರ್ವಹಿಸಿದ್ದರಿಂದ 14 ಎಕರೆ ಪ್ರದೇಶದಲ್ಲಿ ಉತ್ತಮ ಪರಿಸರ ನಿರ್ಮಾಣಗೊಂಡಿದೆ.</blockquote><span class="attribution">– ಎಸ್.ವಿ.ನಾಡಗೌಡರ, ಪ್ರಭಾರ ಕುಲಪತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಎಸ್ಬಿಐ ಫೌಂಡೇಷನ್ ಸಹಯೋಗದಲ್ಲಿ ಇಲ್ಲಿನ ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿನ 14 ಎಕರೆ ಜಾಗದಲ್ಲಿ ರೂಪಿಸಿದ್ದ ಜನ–ವನ ಯೋಜನೆ ಯಶ ಕಂಡಿದ್ದು, 19,200 ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ.</p>.<p>ಮೂರು ವರ್ಷಗಳ ಹಿಂದೆ ಕೇವಲ ಗುಡ್ಡವಾಗಿದ್ದ ಈ ಜಾಗದಲ್ಲಿ ಆಲದ ಮರ, ಬೇವು, ಹುಣಸೆ, ಸಿಮರುಬಾ,ತಾಪ್ಸಿ, ತಬುಬಿಯಾ, ಬಂಗಾಳಿ, ಗಾಳಿ ಮರ, ಪೇರಲ, ಸೀತಾಫಲ, ನೇರಳೆ, ಅರಳಿ ಮರ, ಅತ್ತಿ ಮರ, ಹೊಂಗೆ ಮರ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಇಲ್ಲಿ ನೆಡಲಾಗಿತ್ತು.</p>.<p>ಗಿಡ ನೆಡುವುದರ ಜತೆಗೆ ಅವುಗಳ ಕಾಳಜಿಯನ್ನು ಜತನದಿಂದ ಮಾಡಿದ್ದರಿಂದ ಎಲ್ಲ ಗಿಡಗಳು ಉಳಿದುಕೊಂಡು, ಚೆನ್ನಾಗಿ ಬೆಳೆದು ಹಸಿರಿನ ನಗು ತುಳುಕಿಸುತ್ತಿವೆ. ಗಿಡಗಳನ್ನು ಬೆಂಕಿಯಿಂದ ಅವಘಡದಿಂದ ತಪ್ಪಿಸಲು ಮತ್ತು ಮಣ್ಣಿನ ಸವಕಳಿ ತಡೆಯಲು ಟ್ರಂಚ್ ನಿರ್ಮಾಣ ಮಾಡಲಾಗಿದೆ.</p>.<p>ಇಲ್ಲಿ ನೆಟ್ಟಿರುವ ಗಿಡಗಳಿಗೆ ನೀರಿನ ನಿರಂತರ ಪೂರೈಕೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೊಳವೆಬಾವಿಗೆ ಟ್ವಿನ್ ರಿಂಗ್ ರೀಚಾರ್ಜ್ ವಿಧಾನ ಅಳವಡಿಸಲಾಗಿದೆ. ಇದರಿಂದ ಬೇಸಿಗೆ ಕಾಲದಲ್ಲಿಯೂ ಗಿಡಗಳಿಗೆ ನೀರಿನ ಕೊರತೆಯಾಗದಂತೆ ಪ್ರತಿಯೊಂದು ಗಿಡಕ್ಕೂ ನೀರಿನ ಪೂರೈಕೆ ಆಗುವಂತೆ ಯೋಜಿಸಲಾಗಿದೆ.</p>.<p>ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಕಾಡಿದಾಗ ಹೊರಗಿನಿಂದ ಟ್ಯಾಂಕರ್ಗಳ ಮೂಲ ನೀರು ತಂದು ಪ್ರತಿಯೊಂದು ಗಿಡಕ್ಕೂ ನೀರು ಉಣಿಸಲಾಗಿದೆ. ಇದರಿಂದಾಗಿ ಗಿಡಗಳು ಫಲವತ್ತಾಗಿ ಬೆಳೆದು 14 ಎಕರೆ ಪ್ರದೇಶ ಹಚ್ಚ ಹಸಿರಾಗಿದೆ. ಮೈಮನಗಳಿಗೆ ಮುದ ನೀಡುತ್ತಿದೆ.</p>.<p>ಜನ ವನದಲ್ಲಿ ಗಿಡಗಳನ್ನು ಬೆಳೆಸುವುದರ ಜತೆಗೆ ಉದ್ಯಾನದಂತೆ ಜನರಿಗೆ ಅನುಕೂಲ ಕಲ್ಪಿಸುವ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.</p>.<p>ಸಾರ್ವಜನಿಕರು ಕುಳಿತುಕೊಳ್ಳಲು ಚೆಂಚ್ ವ್ಯವಸ್ಥೆ, ಓಪನ್ ಜಿಮ್, ಬಯಲು ಸಭೆ ನಡೆಸಲು ಸ್ಥಳ ನಿರ್ಮಿಸಲಾಗಿದೆ. ಸೋಲಾರ್ ಲೈಟ್ ಅಳವಡಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹಗಲಿನಂತೆ ರಾತ್ರಿ ವೇಳೆಯಲ್ಲೂ ಜನವನದ ಹಸಿರು ಸೌಂದರ್ಯ ಆಸ್ವಾದಿಸಲು ಇದು ನೆರವಾಗಿದೆ.</p>.<p>ಇಲ್ಲಿರುವ ಓಪನ್ ಮೀಟಿಂಗ್ ಜಾಗದಲ್ಲಿ ಸಾರ್ವಜನಿಕರು ಜನ್ಮದಿನಾಚರಣೆ, ಸಾಂಸ್ಕೃತಿಕ ಸಂಭ್ರಮದಂತಹ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ.</p>.<div><blockquote>ವಿಶ್ವವಿದ್ಯಾಲಯದ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಹಸಿರಿನ ಸಂರಕ್ಷಣೆ ಸ್ವಚ್ಛತೆ ಎಲ್ಲವನ್ನೂ ಬದ್ಧತೆಯಿಂದ ನಿರ್ವಹಿಸಿದ್ದರಿಂದ 14 ಎಕರೆ ಪ್ರದೇಶದಲ್ಲಿ ಉತ್ತಮ ಪರಿಸರ ನಿರ್ಮಾಣಗೊಂಡಿದೆ.</blockquote><span class="attribution">– ಎಸ್.ವಿ.ನಾಡಗೌಡರ, ಪ್ರಭಾರ ಕುಲಪತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>