<p>ಡಂಬಳ: ಈ ಬಾರಿ ಮಾರುಕಟ್ಟೆಯಲ್ಲಿ ಹೂ ಬೆಳೆಗೆ ಬಂಪರ್ ಬೆಲೆ ಇರುವುದರಿಂದ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. <br /> <br /> ಕಳೆದ ವರ್ಷಕ್ಕಿಂತ ಈ ವರ್ಷ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೂ ಸೂಕ್ತ ಬೆಲೆ ದೊರಕುತ್ತಿದೆ. <br /> ಡಂಬಳ ಸೇರಿದಂತೆ ಡೋಣಿ, ಅತ್ತಿಕಟ್ಟಿ, ಕದಾಂಪುರ, ಸಿಂಗಟಾ ರಾಯನ ಕೆರೆ ತಾಂಡೆ, ಶಿವಾಜಿ ನಗರ, ಜಂತ್ಲಿ- ಶಿರೂರ, ನಾರಾಯಣಪುರ, ಪೇಟಾ ಆಲೂರ ಪ್ರದೇಶಗಳಲ್ಲಿ ವಿವಿಧ ಬಗೆಯ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. <br /> <br /> ಈ ಬಾರಿ ಇಲ್ಲಿನ ರೈತರು ಹೂ ಬೆಳೆಯನ್ನು ವಿಪುಲವಾಗಿ ಬೆಳೆಯುವ ಮೂಲಕ ಭರಪೂರ ಆದಾಯ ಪಡೆಯುತ್ತಿದ್ದಾರೆ. <br /> <br /> ಈ ಭಾಗದಲ್ಲಿ ಸೇವಂತಿ, ಚೆಂಡು ಹೂ, ಸುಗಂಧಿ, ಕರ್ನೂಲ್, ರಾಜ್, ಕಾಕಡಾ, ಸರವಾಳ, ಮತ್ತೂರ ಅಷ್ಟೇ ಅಲ್ಲದೆ ನೀಲಂ, ಚಂದ್ರಿಕಾ, ಎಲೋಗೋಲ್ಡ್ ತಳಿಯ ಹೂ ಬೆಳೆಯನ್ನು ಬೆಳೆಯಲಾಗಿದೆ. <br /> <br /> ಇದೀಗ ರಾಜ್ಯದ ವಿವಿಧ ಪ್ರಮುಖ ಮಾರುಕಟ್ಟೆಗಳಿಗೆ ಇಲ್ಲಿನ ಹೂವಿಗೆ ಬೇಡಿಕೆ ಇದ್ದು, ಮಾರಾಟವಾಗುತ್ತಿದೆ. <br /> ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ, ಕೊಲ್ಲಾಪುರ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೂವಿಗೆ ಈ ಬಾರಿ ಉತ್ತಮ ಧಾರಣೆ ದೊರೆತಿದೆ. <br /> <br /> ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಯಾಗಿ ಕಂಡುಕೊಂಡ ಹೂ ಬೆಳೆ ಪ್ರತಿ ಎಕರೆ ಪ್ರದೇಶದಲ್ಲಿ ಪ್ರತಿ ಕಟಾವಿಗೆ 3-4 ಕ್ವಿಂಟಲ್ ಹೂವನ್ನು ರೈತರು ಪಡೆಯುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಕರ್ನೂಲ್ ಹೂವಿಗೆ 80 ರೂಪಾಯಿ, ರಾಜ್ ಇತರೆ ಹೂವಿಗೆ 70ರಿಂದ 80 ರೂಪಾಯಿ ಬೆಲೆ ಇದೆ. <br /> <br /> ನಾಟಿ ಮಾಡಿದ ಆರು ತಿಂಗಳಲ್ಲಿ ಹೂ ಬೆಳೆ ರೈತರಿಗೆ ಬಂಪರ್ ಲಾಭ ತಂದು ಕೊಟ್ಟಿದೆ. ನಮ್ಮ ಹೂವಿಗೆ ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಬೆಲೆ ದೊರೆಯುತ್ತದೆ. ಇದರಿಂದ ನಮ್ಮ ಆದಾಯ ಹೆಚ್ಚುತ್ತದೆ ಎಂದು ರಮೇಶ ಹಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ಹೂ ಬೆಳೆಯ ಮಧ್ಯ ಮಿಶ್ರ ಬೇಸಾಯವಾಗಿ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. <br /> 28.33 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆ ಬೆಳೆಯಲಾಗಿದೆ. ಇದರ ಮೂಲಕ ರೈತರು ಕೃಷಿಯಲ್ಲಿ ಹೊಸತನವನ್ನು ಕಂಡುಕೊಂಡಿದ್ದಾರೆ. <br /> <br /> ಅತಿ ಹೆಚ್ಚು ಪ್ರಮಾಣದ ಒಣ ಭೂಮಿ ಪ್ರದೇಶ ಹೊಂದಿರುವ ಈ ಪ್ರದೇಶದಲ್ಲಿ ಕೊಳವೆ ಬಾವಿ ಮೂಲಕ ನೀರನ್ನು ಪಡೆದು ಹೂ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಇಲ್ಲಿನ ರೈತರರು ಇತರರಿಗೆ ಮಾದರಿಯಾಗಿದ್ದಾರೆ. <br /> <br /> ಹೂ ಬೆಳೆಗಳ ಸಂರಕ್ಷಣೆಗಾಗಿ ಅಗತ್ಯವಿರುವ ಶೈತ್ಯಗಾರವನ್ನು ಡಂಬಳ ಹೋಬಳಿಯ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರ ನಿರ್ಮಿಸಬೇಕು ಎಂಬುದು ಹೂವು ಬೆಳೆಯುವವರ ಕೋರಿಕೆ ಆಗಿದೆ.<br /> <br /> ಹೂವಿನ ಸಂರಕ್ಷಣೆ, ಮಾರಾಟ ಕುರಿತಂತೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡಬೇಕು. ಇದು ನಿರಂತರವಾಗಿ ನಡೆಯಬೇಕು. ಜೊತೆಗೆ ಆಧುನಿಕತೆ ಅಳವಳಡಿಸಿಕೊಳ್ಳಲು ಸೂಕ್ತ ತಜ್ಞರಿಂದ ವಿಚಾರ ಸಂಕಿರಣವನ್ನು ಆಗಾಗ ಏರ್ಪಡಿಸಬೇಕು ಜೊತೆಗೆ ತರಬೇತಿಯನ್ನು ಏರ್ಪಡಿಸಬೇಕು ಎಂಬುದು ಈ ಭಾಗದ ಹೂವಿನ ಬೆಳೆಗಾರರ ಆಗ್ರಹವಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಂಬಳ: ಈ ಬಾರಿ ಮಾರುಕಟ್ಟೆಯಲ್ಲಿ ಹೂ ಬೆಳೆಗೆ ಬಂಪರ್ ಬೆಲೆ ಇರುವುದರಿಂದ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. <br /> <br /> ಕಳೆದ ವರ್ಷಕ್ಕಿಂತ ಈ ವರ್ಷ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೂ ಸೂಕ್ತ ಬೆಲೆ ದೊರಕುತ್ತಿದೆ. <br /> ಡಂಬಳ ಸೇರಿದಂತೆ ಡೋಣಿ, ಅತ್ತಿಕಟ್ಟಿ, ಕದಾಂಪುರ, ಸಿಂಗಟಾ ರಾಯನ ಕೆರೆ ತಾಂಡೆ, ಶಿವಾಜಿ ನಗರ, ಜಂತ್ಲಿ- ಶಿರೂರ, ನಾರಾಯಣಪುರ, ಪೇಟಾ ಆಲೂರ ಪ್ರದೇಶಗಳಲ್ಲಿ ವಿವಿಧ ಬಗೆಯ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. <br /> <br /> ಈ ಬಾರಿ ಇಲ್ಲಿನ ರೈತರು ಹೂ ಬೆಳೆಯನ್ನು ವಿಪುಲವಾಗಿ ಬೆಳೆಯುವ ಮೂಲಕ ಭರಪೂರ ಆದಾಯ ಪಡೆಯುತ್ತಿದ್ದಾರೆ. <br /> <br /> ಈ ಭಾಗದಲ್ಲಿ ಸೇವಂತಿ, ಚೆಂಡು ಹೂ, ಸುಗಂಧಿ, ಕರ್ನೂಲ್, ರಾಜ್, ಕಾಕಡಾ, ಸರವಾಳ, ಮತ್ತೂರ ಅಷ್ಟೇ ಅಲ್ಲದೆ ನೀಲಂ, ಚಂದ್ರಿಕಾ, ಎಲೋಗೋಲ್ಡ್ ತಳಿಯ ಹೂ ಬೆಳೆಯನ್ನು ಬೆಳೆಯಲಾಗಿದೆ. <br /> <br /> ಇದೀಗ ರಾಜ್ಯದ ವಿವಿಧ ಪ್ರಮುಖ ಮಾರುಕಟ್ಟೆಗಳಿಗೆ ಇಲ್ಲಿನ ಹೂವಿಗೆ ಬೇಡಿಕೆ ಇದ್ದು, ಮಾರಾಟವಾಗುತ್ತಿದೆ. <br /> ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ, ಕೊಲ್ಲಾಪುರ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೂವಿಗೆ ಈ ಬಾರಿ ಉತ್ತಮ ಧಾರಣೆ ದೊರೆತಿದೆ. <br /> <br /> ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಯಾಗಿ ಕಂಡುಕೊಂಡ ಹೂ ಬೆಳೆ ಪ್ರತಿ ಎಕರೆ ಪ್ರದೇಶದಲ್ಲಿ ಪ್ರತಿ ಕಟಾವಿಗೆ 3-4 ಕ್ವಿಂಟಲ್ ಹೂವನ್ನು ರೈತರು ಪಡೆಯುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಕರ್ನೂಲ್ ಹೂವಿಗೆ 80 ರೂಪಾಯಿ, ರಾಜ್ ಇತರೆ ಹೂವಿಗೆ 70ರಿಂದ 80 ರೂಪಾಯಿ ಬೆಲೆ ಇದೆ. <br /> <br /> ನಾಟಿ ಮಾಡಿದ ಆರು ತಿಂಗಳಲ್ಲಿ ಹೂ ಬೆಳೆ ರೈತರಿಗೆ ಬಂಪರ್ ಲಾಭ ತಂದು ಕೊಟ್ಟಿದೆ. ನಮ್ಮ ಹೂವಿಗೆ ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಬೆಲೆ ದೊರೆಯುತ್ತದೆ. ಇದರಿಂದ ನಮ್ಮ ಆದಾಯ ಹೆಚ್ಚುತ್ತದೆ ಎಂದು ರಮೇಶ ಹಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ಹೂ ಬೆಳೆಯ ಮಧ್ಯ ಮಿಶ್ರ ಬೇಸಾಯವಾಗಿ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. <br /> 28.33 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆ ಬೆಳೆಯಲಾಗಿದೆ. ಇದರ ಮೂಲಕ ರೈತರು ಕೃಷಿಯಲ್ಲಿ ಹೊಸತನವನ್ನು ಕಂಡುಕೊಂಡಿದ್ದಾರೆ. <br /> <br /> ಅತಿ ಹೆಚ್ಚು ಪ್ರಮಾಣದ ಒಣ ಭೂಮಿ ಪ್ರದೇಶ ಹೊಂದಿರುವ ಈ ಪ್ರದೇಶದಲ್ಲಿ ಕೊಳವೆ ಬಾವಿ ಮೂಲಕ ನೀರನ್ನು ಪಡೆದು ಹೂ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಇಲ್ಲಿನ ರೈತರರು ಇತರರಿಗೆ ಮಾದರಿಯಾಗಿದ್ದಾರೆ. <br /> <br /> ಹೂ ಬೆಳೆಗಳ ಸಂರಕ್ಷಣೆಗಾಗಿ ಅಗತ್ಯವಿರುವ ಶೈತ್ಯಗಾರವನ್ನು ಡಂಬಳ ಹೋಬಳಿಯ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರ ನಿರ್ಮಿಸಬೇಕು ಎಂಬುದು ಹೂವು ಬೆಳೆಯುವವರ ಕೋರಿಕೆ ಆಗಿದೆ.<br /> <br /> ಹೂವಿನ ಸಂರಕ್ಷಣೆ, ಮಾರಾಟ ಕುರಿತಂತೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡಬೇಕು. ಇದು ನಿರಂತರವಾಗಿ ನಡೆಯಬೇಕು. ಜೊತೆಗೆ ಆಧುನಿಕತೆ ಅಳವಳಡಿಸಿಕೊಳ್ಳಲು ಸೂಕ್ತ ತಜ್ಞರಿಂದ ವಿಚಾರ ಸಂಕಿರಣವನ್ನು ಆಗಾಗ ಏರ್ಪಡಿಸಬೇಕು ಜೊತೆಗೆ ತರಬೇತಿಯನ್ನು ಏರ್ಪಡಿಸಬೇಕು ಎಂಬುದು ಈ ಭಾಗದ ಹೂವಿನ ಬೆಳೆಗಾರರ ಆಗ್ರಹವಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>