<p><strong>ಗದಗ: </strong>ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಮದ್ ಭಗವದ್ಗೀತೆಗಳು ಮನುಕುಲಕ್ಕೆ ದಿವ್ಯದೃಷ್ಟಿ ಅನುಗ್ರಹಿಸುವ ಅಪೂರ್ವ ಗ್ರಂಥಗಳು ಎಂದು ಕಾಶಿಯ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.<br /> <br /> ನಗರದ ಪಂಚಾಚಾರ್ಯ ಸೇವಾ ಸಂಘದ ವತಿಯಿಂದ ಆಷಾಢ ಮಾಸದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮನಿ ಹಾಗೂ ಶ್ರೀಮದ್ ಭಗವದ್ಗೀತೆ ಉಪದೇಶಾಮೃತ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಪಂಚ ನೋಡಲು ಪರಮಾತ್ಮ ಚರ್ಮ ಚಕ್ಷುಗಳನ್ನು ಕೊಟ್ಟಿದ್ದಾನೆ.</p>.<p>ಅವುಗಳಿಂದ ಪರಮಾತ್ಮನನ್ನು ಕಾಣಲು ಆಗುವುದಿಲ್ಲ. ಆದರೆ ಪರಮಾತ್ಮನನ್ನು ನೋಡಲು ದಿವ್ಯದೃಷ್ಟಿ ಬೇಕಾಗುವುದು. ಆ ದೃಷ್ಟಿಯನ್ನು ಅನುಗ್ರಹಿಸುವ ಗ್ರಂಥಗಳೇ ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆ ಎಂದು ಹೇಳಿದರು.<br /> <br /> ನಾಲ್ಕು ವೇದಗಳ ಕೊನೆ ಭಾಗವಾದ ಉಪನಿಷತ್ತುಗಳನ್ನು ಆಧಾರವಾಗಿ ಇಟ್ಟುಕೊಂಡು ವ್ಯಾಸ ಮಹರ್ಷಿಯು ಶ್ರೀಮದ್ ಭಗವದ್ಗೀತೆಯನ್ನು ರಚಿಸಿದ್ದಾನೆ. ಅದರಂತೆ 28 ಶಿವಾಗಮಗಳನ್ನು ಆಧಾರವಾಗಿ ಇಟ್ಟುಕೊಂಡು ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ರಚಿಸಿದ್ದಾರೆ.<br /> <br /> ಗೀತೆಯಲ್ಲಿ ಕೃಷ್ಣ-ಅರ್ಜುನ ಸಂವಾದವಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ರೇಣುಕ, ಅಗಸ್ತ ಮಹರ್ಷಿಯರ ಸಂವಾದವಿದೆ. ಎರಡೂ ಗ್ರಂಥಗಳ ಮೂಲಗಳು ವೇದಾಗಮಗಳೇ ಆಗಿವೆ. ಆದ್ದರಿಂದ ಜಗತ್ತಿನ ಪ್ರತಿಯೊಬ್ಬ ಮಾನವರು ಈ ಗ್ರಂಥಗಳ ಪಾರಾಯಣ ಮಾಡುವುದರ ಜೊತೆಗೆ ಅವುಗಳ ಮೇಲಿನ ಪ್ರವಚನಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರೂ ಪರಮಾತ್ಮನನ್ನು ಕಾಣುವ ದಿವ್ಯದಷ್ಟಿಯನ್ನು ಪಡೆದುಕೊಳ್ಳಬಹುದು ಎಂಬ ನುಡಿದರು.<br /> <br /> ಸಾನಿಧ್ಯ ವಹಿಸಿ ಮಾತನಾಡಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಧರ್ಮಗ್ರಂಥಗಳ ಅಧ್ಯಯನ ಮತ್ತು ಶ್ರವಣದಿಂದ ಮೋಕ್ಷಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.<br /> <br /> ಸಮಾರಂಭದಲ್ಲಿ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಪ್ರಕಾಶಕ ಬಸವರಾಜ ಶಾಬಾದಿಮಠ, ವರ್ತಕ ಸೋಮಣ್ಣ ಮಲ್ಲಾಡದ, ಪತ್ರಿಕೋದ್ಯಮಿ ಮಂಜುನಾಥ ಅಬ್ಬಿಗೇರಿ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಜಶೇಖರ ಶಿರೂರ, ವಿ.ಆರ್. ಮಾಳೆಕೊಪ್ಪ ಮಠ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಮದ್ ಭಗವದ್ಗೀತೆಗಳು ಮನುಕುಲಕ್ಕೆ ದಿವ್ಯದೃಷ್ಟಿ ಅನುಗ್ರಹಿಸುವ ಅಪೂರ್ವ ಗ್ರಂಥಗಳು ಎಂದು ಕಾಶಿಯ ಜಂಗಮವಾಡಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.<br /> <br /> ನಗರದ ಪಂಚಾಚಾರ್ಯ ಸೇವಾ ಸಂಘದ ವತಿಯಿಂದ ಆಷಾಢ ಮಾಸದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮನಿ ಹಾಗೂ ಶ್ರೀಮದ್ ಭಗವದ್ಗೀತೆ ಉಪದೇಶಾಮೃತ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಪಂಚ ನೋಡಲು ಪರಮಾತ್ಮ ಚರ್ಮ ಚಕ್ಷುಗಳನ್ನು ಕೊಟ್ಟಿದ್ದಾನೆ.</p>.<p>ಅವುಗಳಿಂದ ಪರಮಾತ್ಮನನ್ನು ಕಾಣಲು ಆಗುವುದಿಲ್ಲ. ಆದರೆ ಪರಮಾತ್ಮನನ್ನು ನೋಡಲು ದಿವ್ಯದೃಷ್ಟಿ ಬೇಕಾಗುವುದು. ಆ ದೃಷ್ಟಿಯನ್ನು ಅನುಗ್ರಹಿಸುವ ಗ್ರಂಥಗಳೇ ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆ ಎಂದು ಹೇಳಿದರು.<br /> <br /> ನಾಲ್ಕು ವೇದಗಳ ಕೊನೆ ಭಾಗವಾದ ಉಪನಿಷತ್ತುಗಳನ್ನು ಆಧಾರವಾಗಿ ಇಟ್ಟುಕೊಂಡು ವ್ಯಾಸ ಮಹರ್ಷಿಯು ಶ್ರೀಮದ್ ಭಗವದ್ಗೀತೆಯನ್ನು ರಚಿಸಿದ್ದಾನೆ. ಅದರಂತೆ 28 ಶಿವಾಗಮಗಳನ್ನು ಆಧಾರವಾಗಿ ಇಟ್ಟುಕೊಂಡು ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ರಚಿಸಿದ್ದಾರೆ.<br /> <br /> ಗೀತೆಯಲ್ಲಿ ಕೃಷ್ಣ-ಅರ್ಜುನ ಸಂವಾದವಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ರೇಣುಕ, ಅಗಸ್ತ ಮಹರ್ಷಿಯರ ಸಂವಾದವಿದೆ. ಎರಡೂ ಗ್ರಂಥಗಳ ಮೂಲಗಳು ವೇದಾಗಮಗಳೇ ಆಗಿವೆ. ಆದ್ದರಿಂದ ಜಗತ್ತಿನ ಪ್ರತಿಯೊಬ್ಬ ಮಾನವರು ಈ ಗ್ರಂಥಗಳ ಪಾರಾಯಣ ಮಾಡುವುದರ ಜೊತೆಗೆ ಅವುಗಳ ಮೇಲಿನ ಪ್ರವಚನಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರೂ ಪರಮಾತ್ಮನನ್ನು ಕಾಣುವ ದಿವ್ಯದಷ್ಟಿಯನ್ನು ಪಡೆದುಕೊಳ್ಳಬಹುದು ಎಂಬ ನುಡಿದರು.<br /> <br /> ಸಾನಿಧ್ಯ ವಹಿಸಿ ಮಾತನಾಡಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಧರ್ಮಗ್ರಂಥಗಳ ಅಧ್ಯಯನ ಮತ್ತು ಶ್ರವಣದಿಂದ ಮೋಕ್ಷಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.<br /> <br /> ಸಮಾರಂಭದಲ್ಲಿ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಪ್ರಕಾಶಕ ಬಸವರಾಜ ಶಾಬಾದಿಮಠ, ವರ್ತಕ ಸೋಮಣ್ಣ ಮಲ್ಲಾಡದ, ಪತ್ರಿಕೋದ್ಯಮಿ ಮಂಜುನಾಥ ಅಬ್ಬಿಗೇರಿ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಜಶೇಖರ ಶಿರೂರ, ವಿ.ಆರ್. ಮಾಳೆಕೊಪ್ಪ ಮಠ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>