<p>ಗದಗ: ಹಳ್ಳಿಗುಡಿಯಲ್ಲಿ ಪೋಸ್ಕೊ ಕಂಪೆನಿಯು ಕೈಗಾರಿಕಾ ಘಟಕ ಸ್ಥಾಪಿಸುವುದನ್ನು ತಡೆಯುವಲ್ಲಿ ಮಾಧ್ಯಮದ ಪಾತ್ರವೂ ಪ್ರಮುಖ ವಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು. <br /> <br /> ಹೈಕೋರ್ಟ್ನಲ್ಲಿ ಪೋಸ್ಕೊ ಪರ ರೈತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ರೈತರಿಗೆ ಸಿಹಿಹಂಚಿ ಅವರು ಮಾತನಾಡಿದರು. <br /> <br /> ಹಳ್ಳಿ ಗುಡಿಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಹಾಗೂ ಅದರಿಂದಾಗ ಬಹುದಾದ ಅನಾಹುತಗಳ ಕುರಿತು ಮಾಧ್ಯಮಗಳು ಎಚ್ಚರಿಸಿದವು. ರೈತರ ಧ್ವನಿಯಾಗಿ ನಿಂತವು. ಈ ಸುದ್ದಿ ರಾಷ್ಟ್ರವ್ಯಾಪಿ ಪ್ರಸಾರಗೊಂಡು ಪರಿಸರ ವಾದಿಗಳೂ ಇತ್ತ ಕಣ್ಣು ಹಾಯಿಸುವಂತಾಯಿತು. <br /> <br /> ಸದ್ಯ ಪೋಸ್ಕೊ ಘಟಕ ಸ್ಥಾಪನೆಗೆ ಸದ್ಯ ತೆರೆಬಿದ್ದಿದ್ದು, ಇದು ರೈತರು, ಪರಿಸರವಾದಿಗಳ ಜಯದ ಜೊತೆಗೆ ಮಾಧ್ಯಮದ ಜಯವೂ ಹೌದು ಎಂದು ಅವರು ನುಡಿದರು. ಈ ಸಂದರ್ಭ `ಪ್ರಜಾವಾಣಿ~ ಜೊತೆಗೆ ಮಾತನಾಡಿದ ಹಳ್ಳಿಗುಡಿ ರೈತರು, ಸರ್ಕಾರ ಭೂಬ್ಯಾಂಕ್ ಯೋಜನೆಯ ಮೂಲಕ ರೈತರ ಜಮೀನನ್ನು ಕಬಳಿಸುವ ಯತ್ನ ನಡೆಸಿದೆ. ಇದು ರೈತರನ್ನು ಕೆರಳಿಸಿದ್ದು, ಸರ್ಕಾರ ಈ ಯತ್ನವನ್ನು ಕೈಬಿಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು. <br /> <br /> ರೈತರಾದ ಹನುಮಂತಪ್ಪ ಗಡ್ಡದ, ಶಿವಪ್ಪ ಮೊಟಗಿ, ಕುಮ್ಮಣ್ಣ ಚನ್ನಳ್ಳಿ, ಅಮರಪ್ಪ ಚನ್ನಳ್ಳಿ, ಶಂಭುಲಿಂಗಪ್ಪ ಬೇವೂರ, ಐಯಜ್ಜ ಕಮತರ, ಶಿವಬಸಪ್ಪ ಚನ್ನಳ್ಳಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ಹಳ್ಳಿಗುಡಿಯಲ್ಲಿ ಪೋಸ್ಕೊ ಕಂಪೆನಿಯು ಕೈಗಾರಿಕಾ ಘಟಕ ಸ್ಥಾಪಿಸುವುದನ್ನು ತಡೆಯುವಲ್ಲಿ ಮಾಧ್ಯಮದ ಪಾತ್ರವೂ ಪ್ರಮುಖ ವಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು. <br /> <br /> ಹೈಕೋರ್ಟ್ನಲ್ಲಿ ಪೋಸ್ಕೊ ಪರ ರೈತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ರೈತರಿಗೆ ಸಿಹಿಹಂಚಿ ಅವರು ಮಾತನಾಡಿದರು. <br /> <br /> ಹಳ್ಳಿ ಗುಡಿಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಹಾಗೂ ಅದರಿಂದಾಗ ಬಹುದಾದ ಅನಾಹುತಗಳ ಕುರಿತು ಮಾಧ್ಯಮಗಳು ಎಚ್ಚರಿಸಿದವು. ರೈತರ ಧ್ವನಿಯಾಗಿ ನಿಂತವು. ಈ ಸುದ್ದಿ ರಾಷ್ಟ್ರವ್ಯಾಪಿ ಪ್ರಸಾರಗೊಂಡು ಪರಿಸರ ವಾದಿಗಳೂ ಇತ್ತ ಕಣ್ಣು ಹಾಯಿಸುವಂತಾಯಿತು. <br /> <br /> ಸದ್ಯ ಪೋಸ್ಕೊ ಘಟಕ ಸ್ಥಾಪನೆಗೆ ಸದ್ಯ ತೆರೆಬಿದ್ದಿದ್ದು, ಇದು ರೈತರು, ಪರಿಸರವಾದಿಗಳ ಜಯದ ಜೊತೆಗೆ ಮಾಧ್ಯಮದ ಜಯವೂ ಹೌದು ಎಂದು ಅವರು ನುಡಿದರು. ಈ ಸಂದರ್ಭ `ಪ್ರಜಾವಾಣಿ~ ಜೊತೆಗೆ ಮಾತನಾಡಿದ ಹಳ್ಳಿಗುಡಿ ರೈತರು, ಸರ್ಕಾರ ಭೂಬ್ಯಾಂಕ್ ಯೋಜನೆಯ ಮೂಲಕ ರೈತರ ಜಮೀನನ್ನು ಕಬಳಿಸುವ ಯತ್ನ ನಡೆಸಿದೆ. ಇದು ರೈತರನ್ನು ಕೆರಳಿಸಿದ್ದು, ಸರ್ಕಾರ ಈ ಯತ್ನವನ್ನು ಕೈಬಿಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು. <br /> <br /> ರೈತರಾದ ಹನುಮಂತಪ್ಪ ಗಡ್ಡದ, ಶಿವಪ್ಪ ಮೊಟಗಿ, ಕುಮ್ಮಣ್ಣ ಚನ್ನಳ್ಳಿ, ಅಮರಪ್ಪ ಚನ್ನಳ್ಳಿ, ಶಂಭುಲಿಂಗಪ್ಪ ಬೇವೂರ, ಐಯಜ್ಜ ಕಮತರ, ಶಿವಬಸಪ್ಪ ಚನ್ನಳ್ಳಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>