<p><strong>ಹಾಸನ: </strong>ಚಿನ್ನದ ಗಟ್ಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಪಹರಿಸುತ್ತಿದ್ದ 9 ಜನರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹2.03 ಲಕ್ಷ ನಗದು, ಎರಡು ಕಾರು, 20 ಮೊಬೈಲ್ ವಶಕ್ಕೆ ಪಡೆಯಲಾಗಿದೆ. </p>.<p>ಕೊಲ್ಕತ್ತದ ಅಮಿನ್ ಉಲ್ಲಖ್, ಬೆಂಗಳೂರಿನ ಅಜಂ, ಸುಲೇಮಾನ್, ಮಹಮ್ಮದ್ ಹನೀಫ್, ಸೈಯ್ಯದ್ ಮುಜಾಹಿದ್, ಮುಂಬೈನ ಇಬ್ರಾಹಿಂ, ನದೀಮ್, ಮೊಹಮ್ಮದ್ ಸೌದ್, ಜಾವೆದ್ ಅಹ್ಮದ್ ಬಂಧಿತ ಆರೋಪಿಗಳು. ಸೈಯ್ಯದ್ ಸೈಫ್ ಎಂಬುವವರನ್ನು ರಕ್ಷಿಸಲಾಗಿದೆ. </p>.<p>ದುಬೈನ ಏಜೆಂಟ್ನಿಂದ ಚಿನ್ನದ ಗಟ್ಟಿ ಪಡೆದಿದ್ದ ಸೈಯ್ಯದ್ ಸೈಫ್, ಅದನ್ನು ಮುಂಬೈನ ವ್ಯಕ್ತಿಗೆ ತಲುಪಿಸದೇ, ತನ್ನ ಸ್ನೇಹಿತ ಉಡುಪಿಯ ಸಾಜಿದ್ಗೆ ಕೊಟ್ಟಿದ್ದರು. ಅದಕ್ಕೆ ಸಾಜಿದ್ನಿಂದ ಸೈಯ್ಯದ್ ಸೈಫ್ ₹80 ಸಾವಿರ ಪಡೆದಿದ್ದರು. ಸೈಯ್ಯದ್ ಸೈಫ್ ಉಡುಪಿಯ ಸಾಜಿದ್ ಮನೆಯಲ್ಲಿದ್ದಾಗ ಎರಡು ಕಾರುಗಳಲ್ಲಿ ಬಂದ 9 ಆರೋಪಿಗಳು, ಸೈಯ್ಯದ್ ಸೈಫ್ರನ್ನು ಅಪಹರಿಸಿದ್ದರು. </p>.<p>ಬೇಲೂರಿನ ಜೆಪಿನಗರದ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ಎಎಸ್ಐ ನಾಗರಾಜ್, ವಾಹನ ತಡೆದು ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಚಿನ್ನದ ಗಟ್ಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಪಹರಿಸುತ್ತಿದ್ದ 9 ಜನರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹2.03 ಲಕ್ಷ ನಗದು, ಎರಡು ಕಾರು, 20 ಮೊಬೈಲ್ ವಶಕ್ಕೆ ಪಡೆಯಲಾಗಿದೆ. </p>.<p>ಕೊಲ್ಕತ್ತದ ಅಮಿನ್ ಉಲ್ಲಖ್, ಬೆಂಗಳೂರಿನ ಅಜಂ, ಸುಲೇಮಾನ್, ಮಹಮ್ಮದ್ ಹನೀಫ್, ಸೈಯ್ಯದ್ ಮುಜಾಹಿದ್, ಮುಂಬೈನ ಇಬ್ರಾಹಿಂ, ನದೀಮ್, ಮೊಹಮ್ಮದ್ ಸೌದ್, ಜಾವೆದ್ ಅಹ್ಮದ್ ಬಂಧಿತ ಆರೋಪಿಗಳು. ಸೈಯ್ಯದ್ ಸೈಫ್ ಎಂಬುವವರನ್ನು ರಕ್ಷಿಸಲಾಗಿದೆ. </p>.<p>ದುಬೈನ ಏಜೆಂಟ್ನಿಂದ ಚಿನ್ನದ ಗಟ್ಟಿ ಪಡೆದಿದ್ದ ಸೈಯ್ಯದ್ ಸೈಫ್, ಅದನ್ನು ಮುಂಬೈನ ವ್ಯಕ್ತಿಗೆ ತಲುಪಿಸದೇ, ತನ್ನ ಸ್ನೇಹಿತ ಉಡುಪಿಯ ಸಾಜಿದ್ಗೆ ಕೊಟ್ಟಿದ್ದರು. ಅದಕ್ಕೆ ಸಾಜಿದ್ನಿಂದ ಸೈಯ್ಯದ್ ಸೈಫ್ ₹80 ಸಾವಿರ ಪಡೆದಿದ್ದರು. ಸೈಯ್ಯದ್ ಸೈಫ್ ಉಡುಪಿಯ ಸಾಜಿದ್ ಮನೆಯಲ್ಲಿದ್ದಾಗ ಎರಡು ಕಾರುಗಳಲ್ಲಿ ಬಂದ 9 ಆರೋಪಿಗಳು, ಸೈಯ್ಯದ್ ಸೈಫ್ರನ್ನು ಅಪಹರಿಸಿದ್ದರು. </p>.<p>ಬೇಲೂರಿನ ಜೆಪಿನಗರದ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ಎಎಸ್ಐ ನಾಗರಾಜ್, ವಾಹನ ತಡೆದು ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಅಪಹರಣ ಕೃತ್ಯ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>