ದಾವಣಗೆರೆ: ನಗರದಲ್ಲಿ ಫೋಟೊ ಕಲರ್ಲ್ಯಾಬ್ ನಡೆಸುತ್ತಿದ್ದ ಎಂಸಿಸಿ ಎ ಬ್ಲಾಕ್ ನಿವಾಸಿ ಹಂಸರಾಜ ಶೆಟ್ಟಿ (57) ಕೊರೊನಾ ಸೋಂಕಿಗೆ ತುತ್ತಾಗಿ ಧಾರವಾಡದ ಎಸ್ಡಿಎಂ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇದ್ರ ಹೆಗ್ಗಡೆ ಅವರ ಪತ್ನಿಯ ಸಹೋದರರಾಗಿರುವ ಹಂಸರಾಜ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಹುಬ್ಬಳ್ಳಿಯಲ್ಲಿ ಕೊರೊನಾ ನಿಯಮಾವಳಿಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.