<p>ಹಾಸನ: ಜಿಲ್ಲೆಯಲ್ಲಿ ಮಂಗಳವಾರ 461 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ<br />8486 ತಲುಪಿದೆ. ಇದು ಅತಿ ಹೆಚ್ಚು ಏಕದಿನದ ಏರಿಕೆಯಾಗಿದೆ.</p>.<p>ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಚೇತರಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ. 206 ಮಂದಿ ಗುಣಮುಖರಾಗಿ<br />ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 5538 ಜನರು ಚೇತರಿಸಿಕೊಂಡಿದ್ದಾರೆ. ಹನ್ನೊಂದು ಮಂದಿ ಸೋಂಕಿನಿಂದ ಸಾವೀಗೀಡಾಗಿದ್ದು, ಮೃತರ ಸಂಖ್ಯೆ 200 ತಲುಪಿದೆ.</p>.<p>ಜಿಲ್ಲೆಯಲ್ಲಿ 2748 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಹೋಂ ಐಸೋಲೇಷನ್ ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ತೀವ್ರ ಜ್ವರ ಹಾಗೂ ಉಸಿರಾಟದಿಂದ ಬಳಲುತ್ತಿದ್ದ ಬೇಲೂರಿನ ವ್ಯಕ್ತಿ (50), ಚನ್ನರಾಯಪಟ್ಟಣದ ಯುವಕ (40),<br />ಆಲೂರು, ತುಮಕೂರಿನ 40 ವರ್ಷದ ಇಬ್ಬರು ಮಹಿಳೆಯರು, ಹಾಸನದ ಯುವತಿ (35), ವೃದ್ಧೆ (80) ಮತ್ತು<br />ಹೊಳೆನರಸೀಪುರದ ಪುರುಷ (53) ಚಿಕಿತ್ಸೆಗೆ ಸ್ಪಂದಿಸಲಿಲ್ಲ. ನಿಯಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದರು.</p>.<p>ಹೊಸದಾಗಿ ಅರಸೀಕೆರೆ ತಾಲ್ಲೂಕಿನ 41, ಚನ್ನರಾಯಪಟ್ಟಣ 42, ಆಲೂರು 21, ಹಾಸನ 275, ಹೊಳೆನರಸೀಪುರ<br />18 , ಅರಕಲಗೂಡು 8, ಬೇಲೂರು 47 , ಸಕಲೇಶಪುರ 6 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್ ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಜಿಲ್ಲೆಯಲ್ಲಿ ಮಂಗಳವಾರ 461 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ<br />8486 ತಲುಪಿದೆ. ಇದು ಅತಿ ಹೆಚ್ಚು ಏಕದಿನದ ಏರಿಕೆಯಾಗಿದೆ.</p>.<p>ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಚೇತರಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ. 206 ಮಂದಿ ಗುಣಮುಖರಾಗಿ<br />ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 5538 ಜನರು ಚೇತರಿಸಿಕೊಂಡಿದ್ದಾರೆ. ಹನ್ನೊಂದು ಮಂದಿ ಸೋಂಕಿನಿಂದ ಸಾವೀಗೀಡಾಗಿದ್ದು, ಮೃತರ ಸಂಖ್ಯೆ 200 ತಲುಪಿದೆ.</p>.<p>ಜಿಲ್ಲೆಯಲ್ಲಿ 2748 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಹೋಂ ಐಸೋಲೇಷನ್ ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ತೀವ್ರ ಜ್ವರ ಹಾಗೂ ಉಸಿರಾಟದಿಂದ ಬಳಲುತ್ತಿದ್ದ ಬೇಲೂರಿನ ವ್ಯಕ್ತಿ (50), ಚನ್ನರಾಯಪಟ್ಟಣದ ಯುವಕ (40),<br />ಆಲೂರು, ತುಮಕೂರಿನ 40 ವರ್ಷದ ಇಬ್ಬರು ಮಹಿಳೆಯರು, ಹಾಸನದ ಯುವತಿ (35), ವೃದ್ಧೆ (80) ಮತ್ತು<br />ಹೊಳೆನರಸೀಪುರದ ಪುರುಷ (53) ಚಿಕಿತ್ಸೆಗೆ ಸ್ಪಂದಿಸಲಿಲ್ಲ. ನಿಯಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ತಿಳಿಸಿದರು.</p>.<p>ಹೊಸದಾಗಿ ಅರಸೀಕೆರೆ ತಾಲ್ಲೂಕಿನ 41, ಚನ್ನರಾಯಪಟ್ಟಣ 42, ಆಲೂರು 21, ಹಾಸನ 275, ಹೊಳೆನರಸೀಪುರ<br />18 , ಅರಕಲಗೂಡು 8, ಬೇಲೂರು 47 , ಸಕಲೇಶಪುರ 6 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್ ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>