ಹೆತ್ತೂರು: ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗ್ರಾಮದ ಎಚ್.ಎಂ ಶ್ರೀನಿವಾಸ ಅವರು ಬುಧವಾರ ತೋಟದಲ್ಲಿ ಕಾಫಿ ಹಣ್ಣು ಕೊಯ್ಲು ಮಾಡುವಾಗ ಕಾಳಿಂಗ ಸರ್ಪ ನೋಡಿದ್ದು, ತಕ್ಷಣ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು, ಸಕಲೇಶಪುರದ ಉರಗ ಪ್ರೇಮಿ ಮಹಮ್ಮದ ಫರನ್ ಅವರನ್ನು ಸ್ಥಳಕ್ಕೆ ಕರೆತಂದರು.
ಸತತ ಎರಡು ಗಂಟೆ ಪ್ರಯತ್ನದಿಂದ 16 ಅಡ್ಡಿ ಉದ್ದ, 20 ಕೆ.ಜಿ. ತೂಕದ ಕಾಳಿಂಗ ಸರ್ಪ ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಗಸ್ತು ಅರಣ್ಯಾಧಿಕಾರಿ ನವೀನ್ ಎಸ್.ಆರ್., ಸಿಬ್ಬಂದಿ ಪ್ರೇಮಕುಮಾರ್, ಪರಮೇಶ್ ಎಚ್.ಪಿ. ಹಾಜರಿದ್ದರು.