<p><strong>ಹೊಳೆನರಸೀಪುರ:</strong> ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಸೋಮವಾರ ಏರ್ಪಡಿಸಿದ್ದ ಮುದ್ದೆ ಹಾಗೂ ಹುರುಳಿಸಾರು ಉಣ್ಣುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹುಲಿವಾಲದ ರಾಮೇಗೌಡ 5 ನಿಮಿಷದಲ್ಲಿ 250 ಗ್ರಾಂ ತೂಕದ ಆರೂವರೆ (1,625 ಗ್ರಾಂ) ಮುದ್ದೆ ಮುರಿದು ಪ್ರಥಮ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಕಲ್ಲುಬ್ಯಾಡರಹಳ್ಳಿಯ ಪದ್ಮಾವತಿ 250 ಗ್ರಾಂ ತೂಕದ 6 ಮುದ್ದೆ (1,500 ಗ್ರಾಂ) ಉಂಡು ಮೊದಲಿಗರಾದರು. ತಲಾ ₹ 5 ಸಾವಿರ ನಗದು ಬಹುಮಾನ ಪಡೆದರು.</p>.<p>ಪಟ್ಟಣದ ವೈಷ್ಣವಿ ಚಾರಿಟಬಲ್ ಟ್ರಸ್ಟ್ಯಿಂದ ಏರ್ಪಡಿಸಿದ್ದ 5 ನಿಮಿಷ ರಾಗಿ ಮುದ್ದೆ, ಹುರಳಿಸಾರು ಬೆಣ್ಣೆಜೊತೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಆಸಕ್ತಿ ಕೆರಳಿಸಿತ್ತು. ಪ್ರತ್ಯೇಕ ನಡೆದ ಸ್ಪರ್ಧೆಯಲ್ಲಿ 6 ಜನ ಪುರುಷರು 8 ಜನ ಮಹಿಳೆಯರು ಭಾಗವಹಿಸಿದ್ದರು.</p>.<p>ಹುಚ್ಚನಕೊಪ್ಪಲು ಮಹೇಶ ಐದೂವರೆ ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿದರು. ಪಟ್ಟಣದ ವಿನುತಾ 4 ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿ ₹ 3 ಸಾವಿರ ಪಡೆದರು.</p>.<p>ಮೊದಲೆರೆಡು ಸ್ಥಾನ ಪಡೆದ ಮಹಿಳೆಯರಿಗೆ ನಗದು ಜೊತೆಗೆ ರೇಣುಕೇಶ್ ಸೀರೆಗಳನ್ನು ಬಹುಮಾನವಾಗಿ ನೀಡಿದರು.</p>.<p>ಟ್ರಸ್ಟಿನ ಕಿಟ್ಟಿ, ಕಾಮಾಕ್ಷಿ, ಸುದರ್ಶನ್ ಬಾಬು, ಅಶೋಕ್, ಈಶ್ವರ್, ಹರಿಣಾಕ್ಷಿ, ಕುಮುದಾ, ಮಂಜುಳಾ, ರವೀಶ, ಲಕ್ಷ್ಮೀ ಇತರರು ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಸೋಮವಾರ ಏರ್ಪಡಿಸಿದ್ದ ಮುದ್ದೆ ಹಾಗೂ ಹುರುಳಿಸಾರು ಉಣ್ಣುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹುಲಿವಾಲದ ರಾಮೇಗೌಡ 5 ನಿಮಿಷದಲ್ಲಿ 250 ಗ್ರಾಂ ತೂಕದ ಆರೂವರೆ (1,625 ಗ್ರಾಂ) ಮುದ್ದೆ ಮುರಿದು ಪ್ರಥಮ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಕಲ್ಲುಬ್ಯಾಡರಹಳ್ಳಿಯ ಪದ್ಮಾವತಿ 250 ಗ್ರಾಂ ತೂಕದ 6 ಮುದ್ದೆ (1,500 ಗ್ರಾಂ) ಉಂಡು ಮೊದಲಿಗರಾದರು. ತಲಾ ₹ 5 ಸಾವಿರ ನಗದು ಬಹುಮಾನ ಪಡೆದರು.</p>.<p>ಪಟ್ಟಣದ ವೈಷ್ಣವಿ ಚಾರಿಟಬಲ್ ಟ್ರಸ್ಟ್ಯಿಂದ ಏರ್ಪಡಿಸಿದ್ದ 5 ನಿಮಿಷ ರಾಗಿ ಮುದ್ದೆ, ಹುರಳಿಸಾರು ಬೆಣ್ಣೆಜೊತೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಆಸಕ್ತಿ ಕೆರಳಿಸಿತ್ತು. ಪ್ರತ್ಯೇಕ ನಡೆದ ಸ್ಪರ್ಧೆಯಲ್ಲಿ 6 ಜನ ಪುರುಷರು 8 ಜನ ಮಹಿಳೆಯರು ಭಾಗವಹಿಸಿದ್ದರು.</p>.<p>ಹುಚ್ಚನಕೊಪ್ಪಲು ಮಹೇಶ ಐದೂವರೆ ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿದರು. ಪಟ್ಟಣದ ವಿನುತಾ 4 ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿ ₹ 3 ಸಾವಿರ ಪಡೆದರು.</p>.<p>ಮೊದಲೆರೆಡು ಸ್ಥಾನ ಪಡೆದ ಮಹಿಳೆಯರಿಗೆ ನಗದು ಜೊತೆಗೆ ರೇಣುಕೇಶ್ ಸೀರೆಗಳನ್ನು ಬಹುಮಾನವಾಗಿ ನೀಡಿದರು.</p>.<p>ಟ್ರಸ್ಟಿನ ಕಿಟ್ಟಿ, ಕಾಮಾಕ್ಷಿ, ಸುದರ್ಶನ್ ಬಾಬು, ಅಶೋಕ್, ಈಶ್ವರ್, ಹರಿಣಾಕ್ಷಿ, ಕುಮುದಾ, ಮಂಜುಳಾ, ರವೀಶ, ಲಕ್ಷ್ಮೀ ಇತರರು ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>