<p><strong>ಹಳೇಬೀಡು:</strong> ದೇವಾಲಯದ ಸುತ್ತಮುತ್ತಲೂ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಹಲವು ವಿಗ್ರಹಗಳಿಗೆ<br />ಹಾನಿಯಾಗಿರುವುದು ವರದಿಯಾಗಿದೆ.</p>.<p>ಜೈನಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು,ಈಕಾರ್ಯ ಸುಗಮವಾಗಿ ನಡೆಯುವ ಉದ್ದೇಶದಿಂದ ಗಿಡ ಗಂಟಿ ನಾಶಪಡಿಸಲು ಶನಿವಾರ ಬೆಂಕಿ ಹಾಕಿದ್ದ ವೇಳೆ ಅಚಾತುರ್ಯ ನಡೆದಿದ್ದು, ಭಾನುವಾರ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ಈ ದೇವಾಲಯದ ಸುತ್ತಲೂ ಇರುವ ಕಳೆಗಳನ್ನು ಕಿತ್ತು ಆವರಣವನ್ನು ಶುಚಿಗೊಳಿಸುವ ಉದ್ದೇಶದಿಂದ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಬೆಂಕಿ ಕೆನ್ನಾಲಗೆ ಚಾಚಿ ದೇವಸ್ಥಾನದಲ್ಲಿರುವ ಐತಿಹಾಸಿಕ ವಿಗ್ರಹಗಳು ಸುಟ್ಟು ಹೋಗಿವೆ. ಇದರಿಂದ ವಿಗ್ರಹಗಳು ಭಗ್ನವಾಗಿವೆ.</p>.<p>‘ಬಿಸಿಲಿಗೆ ಒಣಗಿದ್ದ ಗಿಡ, ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು, ಕೆರೆ ದಂಡೆಯಲ್ಲಿ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ ಕಾರ್ಮಿಕರು ಇಂಥದ್ದೊಂದು ಬೇಜವಾಬ್ದಾರಿಯ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಕಾರ್ಮಿಕರು ಪ್ರಯತ್ನ ಪಟ್ಟರೂ ವಿಗ್ರಹಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮದವರಿಗೆ ಅವಕಾಶ ನೀಡಲಿಲ್ಲ.</p>.<p>‘ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯದ ಸಹಾಯಕ ಅಧಿಕಾರಿ ನಾಗನೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ದೇವಾಲಯದ ಸುತ್ತಮುತ್ತಲೂ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಹಲವು ವಿಗ್ರಹಗಳಿಗೆ<br />ಹಾನಿಯಾಗಿರುವುದು ವರದಿಯಾಗಿದೆ.</p>.<p>ಜೈನಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು,ಈಕಾರ್ಯ ಸುಗಮವಾಗಿ ನಡೆಯುವ ಉದ್ದೇಶದಿಂದ ಗಿಡ ಗಂಟಿ ನಾಶಪಡಿಸಲು ಶನಿವಾರ ಬೆಂಕಿ ಹಾಕಿದ್ದ ವೇಳೆ ಅಚಾತುರ್ಯ ನಡೆದಿದ್ದು, ಭಾನುವಾರ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ಈ ದೇವಾಲಯದ ಸುತ್ತಲೂ ಇರುವ ಕಳೆಗಳನ್ನು ಕಿತ್ತು ಆವರಣವನ್ನು ಶುಚಿಗೊಳಿಸುವ ಉದ್ದೇಶದಿಂದ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಬೆಂಕಿ ಕೆನ್ನಾಲಗೆ ಚಾಚಿ ದೇವಸ್ಥಾನದಲ್ಲಿರುವ ಐತಿಹಾಸಿಕ ವಿಗ್ರಹಗಳು ಸುಟ್ಟು ಹೋಗಿವೆ. ಇದರಿಂದ ವಿಗ್ರಹಗಳು ಭಗ್ನವಾಗಿವೆ.</p>.<p>‘ಬಿಸಿಲಿಗೆ ಒಣಗಿದ್ದ ಗಿಡ, ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು, ಕೆರೆ ದಂಡೆಯಲ್ಲಿ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ ಕಾರ್ಮಿಕರು ಇಂಥದ್ದೊಂದು ಬೇಜವಾಬ್ದಾರಿಯ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಕಾರ್ಮಿಕರು ಪ್ರಯತ್ನ ಪಟ್ಟರೂ ವಿಗ್ರಹಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮದವರಿಗೆ ಅವಕಾಶ ನೀಡಲಿಲ್ಲ.</p>.<p>‘ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯದ ಸಹಾಯಕ ಅಧಿಕಾರಿ ನಾಗನೂರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>