ಸರ್ಕಾರದ ಅನುದಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲ್ಲೂಕು ಪಂಚಾಯಿತಿಯ ಅನುಮೋದನೆ ಪಡೆದು ಮನೆ ನಿರ್ಮಾಣದ ಕಾಮಗಾರಿ ಪ್ರಾರಂಭಿಸಿದ್ದು, ದುರುದ್ದೇಶದಿಂದ ಕೆಲ ವ್ಯಕ್ತಿಗಳಾದ ರೌಡಿಶೀಟರ್ ತಿರುಮಲಹಳ್ಳಿ ಶಿವಕುಮಾರು, ತಿರುಮಲನಹಳ್ಳಿ ಹರೀಶ್ ಹಾಗೂ ಗ್ರಾಮದ ವ್ಯಕ್ತಿಗಳಾದ ಮಲ್ಲಿಕಾರ್ಜುನ, ಕುಸುಮ, ಸಿದ್ದಯ್ಯ, ಯಶೋದಮ್ಮ, ಶಶಿಕಲಾ, ಸಾವಿತ್ರಮ್ಮ ಶಿವಶಂಕರ, ಸುಜಾತಾ ಎಂಬುವವರು ದುರುದ್ದೇಶದಿಂದ ನಮಗೆ ಅಡ್ಡಿ ಉಂಟು ಮಾಡಲು ಅಂಬೇಡ್ಕರ್ ಅವರ ಪೋಟೋ ಮತ್ತು ಫ್ಲೆಕ್ಸ್ ಇಟ್ಟಿದ್ದಾರೆ ಎಂದು ದೂರಿದರು.