ಮಕ್ಕಳಿಗೆ ಆಹಾರ ಮತ್ತು ಇಲಾಖೆಗೆ ವರದಿ ನೀಡಲು ಅಂಗನವಾಡಿಗೆ ಬಂದಿದ್ದ ವೇಳೆ ಕುಸಿದು ಬಿದ್ದಿದ್ದಾರೆ.ಆಟವಾಡುತ್ತಿದ್ದ ಹುಡುಗನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.
‘ಹಿರೀಸಾವೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಕೋವಿಡ್–19 ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೋವಿಡ್ ಸೋಂಕು ಇಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ವೈದ್ಯಾಧಿಕಾರಿ ಶಿವಸ್ವಾಮಿ ತಿಳಿಸಿದರು.
ತುಮಕೂರು ಜಿಲ್ಲೆಯ ಗುಂಗರಮಳೆ ಗ್ರಾಮದ ಕೆಂಪಮ್ಮ ಕೆಲ ವರ್ಷಗಳಿಂದ ತಾಯಿ ಮನೆ ಕಣತೂರು ಗ್ರಾಮದಲ್ಲಿ ವಾಸವಿದ್ದಾರೆ.