ಗುಡ್ಡೇನಹಳ್ಳಿ ಕೊಪ್ಪಲಿನ ನೊಂದ ಮಹಿಳೆ ಶಾಹಿನಾ ತಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ 25 ವರ್ಷಗಳಿಂದ ನಾವು ಅದೇ ಸ್ಥಳದಲ್ಲಿ ವಾಸವಾಗಿದ್ದೇವೆ. ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕನ್ನು 2020ರ ಅ. 2ರಂದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಡಿ. 2ರಂದು ಅದೇ ಗ್ರಾಮದ ಅಪ್ಪಿಗೌಡ ಎಂಬಾತ ನಮ್ಮ ಮನೆಯಲ್ಲಿ ಮಕ್ಕಳು ಮಾತ್ರ ಇದ್ದ ವೇಳೆ ಮನೆಗೆ ನುಗ್ಗಿ, 2 ಮೊಬೈಲ್ ಹಾಗೂ ಮನೆಯ ಬೀಗದ ಕೀ ಕದ್ದುಕೊಂಡು ಹೋಗಿದ್ದನು. ಈ ಬಗ್ಗೆಯೂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು’ ಎಂದು ವಿವರಿಸಿದರು.