ವಿಧಾನಸೌಧದ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದ ಮಕ್ಕಳು.
‘ಅವಕಾಶ ದೊರೆತ ತೃಪ್ತಿ’
ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಾನಸಭಾ ಅಧಿವೇಶನ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು ಎಂದು ಅಂದುಕೊಂಡಿದ್ದೆ. ಅಂತಹ ಸುವರ್ಣ ಅವಕಾಶ ಇಂದು ದೊರೆತಿದ್ದಕ್ಕೆ ತೃಪ್ತಿ ಇದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಮಕ್ಕಳು ಕಲಾಪ ವೀಕ್ಷಣೆ ಮಾಡಲು ಬಂದಿದ್ದಾರೆ ಎಂದು ಸಭಾಧ್ಯಕ್ಷರಿಗೆ ಪತ್ರ ಕಳಿಸಿದ್ದೆ. ಅದನ್ನು ಓದಿ ಸಭಾಧ್ಯಕ್ಷರು ಮಕ್ಕಳ ಉಪಸ್ಥಿತಿ ಗುರುತಿಸಿ ಸ್ವಾಗತಿಸಿದ್ದಕ್ಕೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲುತ್ತೇನೆ ಎಂದರು. ಸಕಲೇಶಪುರದ ರೋಟರಿ ಸಂಸ್ಥೆ ವತಿಯಿಂದ ಕೌಡಹಳ್ಳಿಯಲ್ಲಿ ಸುಮಾರು 4 ದಶಕಗಳಿಂದ ಶ್ರವಣದೋಷ ಉಳ್ಳ ಮಕ್ಕಳಿಗೆ ಉಚಿತವಾಗಿ ಊಟ ವಸತಿ ಹಾಗೂ ಶಿಕ್ಷಣ ನೀಡುತ್ತಿರುವುದು ದೊಡ್ಡ ಸೇವೆ ಎಂದರು.