ತಂದೆ ಎಚ್.ಡಿ.ರೇವಣ್ಣ ಅವರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂಬ ಆರೋಪಕ್ಕೆ ಕಿಡಿ ಕಾರಿದ ಪ್ರಜ್ವಲ್, ‘ಇದೆಲ್ಲಾ ಯಾರೋ ಮಾಡುತ್ತಿರುವ ಸುಳ್ಳು ಆರೋಪ. ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿ ಎಷ್ಟೊಂದು ಕೆಲಸ ಮಾಡಿದ್ದಾರೆ. ಯಾವು ಕ್ಷೇತ್ರಕ್ಕೆ, ಯಾವ ಪಕ್ಷದ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ದಾಖಲೆ ಕೊಡಲು ಸಿದ್ಧ’ ಎಂದರು.