<p><strong>ಹಾಸನ</strong>: ಪ್ರತಿಬಾರಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ಬೆಳೆಗಾರರು, ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಶುಂಠಿ ಮೂಲಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಮುಂದಾಗಿದ್ದ ಬೆಳೆಗಾರರೂ, ಬೆಲೆ ಕುಸಿತದಿಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ.</p>.<p>ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದಿದ್ದ ಹಸಿ ಶುಂಠಿಗೆ ಬೆಲೆಯು ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>20023-24 ರಲ್ಲಿ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ಸಾವಿರ ರೂಪಾಯಿಗಳಲ್ಲಿ ಸಿಗುತ್ತಿದ್ದ ಲಾಭವು ಲಕ್ಷಗಳಲ್ಲಿ ಸಿಕ್ಕಿದ್ದರಿಂದ ಪ್ರೇರಿತರಾದ ಬೆಳೆಗಾರರು, ಜಿಲ್ಲೆಯ ಕೊಣನೂರು, ರಾಮನಾಥಪುರ, ಆಲೂರು, ಅರಕಲಗೂಡು ತಾಲ್ಲೂಕಿನಲ್ಲಿ ವ್ಯಾಪಕವಾಗಿ ಶುಂಠಿ ಕೃಷಿ ಆರಂಭಿಸಿದರು. ಈಗ ಅದುವೇ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.</p>.<p>ಉತ್ತಮ ಆದಾಯದ ನಿರೀಕ್ಷೆಯಿ ಇಟ್ಟುಕೊಂಡು ಹಿಂದಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಶುಂಠಿ ಬೆಳೆಯಲು ಮುಂದಾದ ಬೆಳೆಗಾರರನ್ನು, ಈ ವರ್ಷದ ಬೆಲೆ ಕುಸಿತವು ಇನ್ನಿಲ್ಲದಂತೆ ಕಾಡಿದೆ.</p>.<p>ಶುಂಠಿ ಕಟಾವು ಪ್ರಾರಂಭವಾದ 2024 ರ ಅಗಸ್ಟ್ನಲ್ಲಿ 60 ಕೆ.ಜಿ. ಶುಂಠಿ ಮೂಟೆಗೆ ₹1600 ಬೆಲೆ ಇತ್ತು. ಅಕ್ಟೋಬರ್ನಲ್ಲಿ ₹1,900 ತಲುಪಿ ಸ್ವಲ್ಪ ಆಸೆ ಹುಟ್ಟಿಸಿತ್ತು. ಆದರೆ, ಅಂದಿನಿಂದ ಬೆಲೆ ಇಳಿಮುಖವಾಗಿದ್ದು, ಶುಂಠಿ ಬೆಳೆಗಾರರು ಲಕ್ಷಗಟ್ಟಲೆ ನಷ್ಟ ಅನುಭವಿಸುವಂತಾಗಿದೆ.</p>.<p>ಕಳೆದ ವರ್ಷ ಶುಂಠಿ ಕಟಾವು ಪ್ರಾರಂಭವಾದ ದಿನದಲ್ಲಿ ಪ್ರತಿ 60 ಕೆ.ಜಿ. ಮೂಟೆಗೆ ಬೆಲೆಯು ₹3,500 ದಿಂದ ಪ್ರಾರಂಭವಾಗಿ ಗರಿಷ್ಠ ₹6ಸಾವಿರ ತಲುಪಿತ್ತು. ಸದ್ಯ ಪ್ರತಿ 60 ಕೆ.ಜಿ. ಮೂಟೆಗೆ ₹700 ರಿಂದ ₹1ಸಾವಿರ ದರವಿದೆ.</p>.<p>ಕಳೆದ ವರ್ಷ ಪ್ರತಿ ಮೂಟೆ ಬೀಜದ ಶುಂಠಿಗೆ ₹6,200 ರಿಂದ ₹6,500ರವರೆಗೆ ಬೆಲೆ ಇತ್ತು. ಈ ವರ್ಷ ದರ ಕುಸಿತ ಹಿನ್ನೆಲೆಯಲ್ಲಿ ಬೀಜದ ಶುಂಠಿ ಬೆಲೆ ₹1,700 ದಿಂದ ₹1,800 ಕ್ಕೆ ಕುಸಿದಿದೆ.</p>.<p>ಒಂದು ಎಕರೆ ವಿಸ್ತೀರ್ಣದಲ್ಲಿ 400 ಚೀಲ ಶುಂಠಿ ಇಳುವರಿ ಬಂದರೂ, ಇಂದಿನ ದರದಲ್ಲಿ ಒಟ್ಟಾರೆ ₹4 ಲಕ್ಷ ದೊರಕುತ್ತಿದ್ದು, ₹6ಲಕ್ಷದಿಂದ ರಿಂದ ₹6.5 ಲಕ್ಷ ಖರ್ಚಾಗಿದೆ. ಎಕರೆಯೊಂದರಲ್ಲಿ ಶುಂಠಿ ಬೆಳೆದ ಬೆಳೆಗಾರರಿಗೆ ₹2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.</p>.<p>ಕಳೆದ ವರ್ಷ ಶುಂಠಿಗೆ ಹೆಚ್ಚಿನ ಬೆಲೆ ದಕ್ಕಿದ್ದರಿಂದ ಉತ್ತೇಜಿತರಾದ ಅನೇಕರು ಮೊದಲ ಬಾರಿಗೆ ಶುಂಠಿ ಬೆಳೆಯಲು ಮುಂದಾಗಿದ್ದು, ಅವರಿಗೆ ಲಕ್ಷಾಂತರ ನಷ್ಟವಾಗಿದ್ದು, ಶುಂಠಿಯ ಸಹವಾಸವೇ ಬೇಡ ಎನ್ನುವಂತಾಗಿದೆ.</p>.<p>ಹಸಿ ಶುಂಠಿ ಬೆಲೆಯು ಇಳಿಮುಖವಾಗಿರುವುದರಿಂದ ಈ ವರ್ಷ ಶುಂಠಿ ಕೃಷಿ ಕೈಗೊಳ್ಳಲು ಬೆಳೆಗಾರರು ಆಸಕ್ತಿ ತೋರಿಲ್ಲ. ಅನೇಕ ವರ್ಷಗಳಿಂದ ಬೆಳೆಯುತ್ತಿರುವ ಕೆಲವೇ ಕೆಲವರು ಜಮೀನನ್ನು ಉತ್ತಿ, ಹದ ಮಾಡಲು ಪ್ರಾರಂಭಿಸಿದ್ದಾರೆ. ಕೋಳಿಗೊಬ್ಬರಕ್ಕೂ ಕಳೆದ ವರ್ಷವಿದ್ದ ಬೇಡಿಕೆ ಕುಗ್ಗಿದೆ. ಕಾರ್ಮಿಕರಿಗೆ ನೀಡುತ್ತಿದ್ದ ಕೂಲಿ ಇಳಿಯದೇ ದುಬಾರಿ ಎನಿಸಿದೆ.</p>.<p>ಕಳೆದ ವರ್ಷ ಫೆಬ್ರುವರಿ ಸಮಯಕ್ಕೆ ಬಹುತೇಕ ಶುಂಠಿ ಕಿತ್ತು ಮಾರಾಟ ಮಾಡಲಾಗಿತ್ತು. ಈ ವರ್ಷ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅದೆಷ್ಟೋ ಬೆಳೆಗಾರರು ಶುಂಠಿಯನ್ನು ಕೀಳದೆ ಜಮೀನಿನಲ್ಲೇ ಬಿಟ್ಟಿದ್ದಾರೆ. ಬಿರುಬಿಸಿಲಿನಲ್ಲಿ ಅದಕ್ಕೆ ನೀರುಣಿಸಲು ಸುಸ್ತಾಗುತ್ತಿದ್ದಾರೆ.</p>.<p><strong>ನಿರ್ವಹಣೆ:</strong> ಚಿದಂಬರಪ್ರಸಾದ, ಪೂರಕ ಮಾಹಿತಿ: ಗಂಗೇಶ್ ಬಿ.ಪಿ., ಎಂ.ಪಿ. ಹರೀಶ್.</p>.<p><strong>ಬೇರೆ ರಾಜ್ಯಗಳಲ್ಲಿ ಹೆಚ್ಚು ಇಳುವರಿ</strong></p><p>ಕೇರಳ, ಮಹಾರಾಷ್ಟದ ಸತಾರ, ಔರಂಗಾಬಾದ್, ಆಸ್ಸಾಂ ಮತ್ತು ಛತ್ತಿಸಗಢ ರಾಜ್ಯಗಳಲ್ಲಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದು, ಅಲ್ಲಿ ಕರ್ನಾಟಕಕ್ಕಿಂತ ಉತ್ತಮ ಇಳುವರಿ ದೊರೆಯುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಶುಂಠಿ ಬೆಲೆಯು ಕುಸಿದಿದೆ.</p><p>ಸತೀಶ್ ಕೆ.ಟಿ., ಶುಂಠಿ ಬೆಳೆಗಾರ, ಕಾರ್ಗಲ್</p> <p><strong>ಲಕ್ಷಾಂತರ ರೂಪಾಯಿ ನಷ್ಟ</strong></p><p>ಹಸಿ ಶುಂಠಿಯ ಬೆಲೆ ಕುಸಿತದಿಂದ ಬೆಳೆಗಾರರೂ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಅನೇಕ ವರ್ಷಗಳಿಂದ ಶುಂಠಿ ಕೃಷಿ ಮಾಡುತ್ತಿರುವ ಬೆಳೆಗಾರರೂ ಮುಗ್ಗರಿಸುವಂತಾಗಿದೆ.</p><p>ಮುರುಳೀಧರ್ ಎಚ್.ಟಿ., ಶುಂಠಿ ಬೆಳೆಗಾರ, ಹೊಸಗುತ್ತಿ</p> <p><strong>ಖರೀದಿಸಲು ಹಿಂದೇಟು</strong></p><p>ಕಳೆದ ವರ್ಷ ಶುಂಠಿ ಮಾರಾಟ ಮಾಡಲು ವ್ಯಾಪಾರಿಗಳು ಜಮೀನಿನ ಬಳಿ ಬರುತ್ತಿದ್ದರು. ಈ ವರ್ಷ ಬೆಲೆ ಇಳಿಕೆಯಿಂದಾಗಿ ಬೆಳೆಗಾರರೆ ವ್ಯಾಪಾರಿಗಳನ್ನು ಹುಡುಕಿಕೊಂಡು ಹೋದರೂ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.</p><p>ಮಂಜು, ಶುಂಠಿ ಬೆಳೆಗಾರ, ಸಿದ್ದಾಪುರ</p> <p><strong>ಬೆಳೆಯದಿರಲು ತೀರ್ಮಾನ</strong></p><p>10 ವರ್ಷಗಳಿಂದ ಶುಂಠಿ ಬೆಳೆಯುತ್ತಿದ್ದು, 2 ವರ್ಷ ಮಾತ್ರ ಲಾಭ ಬಂತು. ಐದು ವರ್ಷ ಖರ್ಚಾದ ಹಣ ಬಂತು. ಈ ವರ್ಷ ಸಂಪೂರ್ಣ ರೋಗ ತಗುಲಿದ್ದು, ಖರ್ಚು ಮಾಡಿದ್ದ ಹಣದಲ್ಲಿ ಶೇ 30 ರಷ್ಟು ಮಾತ್ರ ವಾಪಸ್ ಬಂತು. ಜೀವನದಲ್ಲಿ ಶುಂಠಿ ಬೆಳೆಯಬಾರದು ಎಂದು ತೀರ್ಮಾನಿಸಿದ್ದೇನೆ.</p><p>ಬಿ. ಸಿ. ವೇದಮೂರ್ತಿ, ಕೃಷಿಕ, ಭೈರಾಪುರ</p> <p><strong>ಶುಂಠಿ ಸಹವಾಸವೇ ಬೇಡ</strong></p><p>4 ವರ್ಷಗಳಿಂದ ಬೆಳೆಯುತ್ತಿದ್ದು, ಕಳೆದ ವರ್ಷ ಲಾಭ ದೊರಕಿತು. ಈ ವರ್ಷ ದುಪ್ಪಟ್ಟು ಬೆಳೆ ನಾಟಿ ಮಾಡಿದೆ. ಬೆಳೆ ಸಂಪೂರ್ಣ ರೋಗ ತಗುಲಿ, ನಷ್ಟ ಅನುಭವಿಸಬೇಕಾಗಿದೆ. ಶುಂಠಿ ಸಹವಾಸ ಬೇಡವೇ ಬೇಡ.</p><p>ಶಿವನಂಜೇಗೌಡ, ಕೃಷಿಕ, ಮರಸು ಗ್ರಾಮ</p> <p><strong>ಹೊಸರೋಗದ ತಲೆನೋವು</strong></p><p>ಶುಂಠಿಯ ಬೆಲೆ ಕುಸಿದರೂ ಕೂಲಿಯ ದರ ಇಳಿಕೆಯಾಗಿಲ್ಲ. ಕಳೆದ ವರ್ಷದಿಂದ ಶುಂಠಿಗೆ ಹೊಸದಾಗಿ ತಗುಲುತ್ತಿರುವ ಕೆಂಪು ಕೊಳೆ ವೈರಸ್ ಮತ್ತಷ್ಟು ಭಯ ತಂದಿದೆ. ಈ ರೋಗ ತಗುಲಿದ 3–4 ದಿನಗಳಲ್ಲೆ ಕಾಂಡ ಒಣಗಿ ಗಿಡವೇ ಇಲ್ಲದಂತಾಗುತ್ತದೆ.</p><p>ಮನು, ಶುಂಠಿ ಬೆಳೆಗಾರ, ಹೊಡೆನೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಪ್ರತಿಬಾರಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ಬೆಳೆಗಾರರು, ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಶುಂಠಿ ಮೂಲಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಮುಂದಾಗಿದ್ದ ಬೆಳೆಗಾರರೂ, ಬೆಲೆ ಕುಸಿತದಿಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ.</p>.<p>ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದಿದ್ದ ಹಸಿ ಶುಂಠಿಗೆ ಬೆಲೆಯು ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>20023-24 ರಲ್ಲಿ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ಸಾವಿರ ರೂಪಾಯಿಗಳಲ್ಲಿ ಸಿಗುತ್ತಿದ್ದ ಲಾಭವು ಲಕ್ಷಗಳಲ್ಲಿ ಸಿಕ್ಕಿದ್ದರಿಂದ ಪ್ರೇರಿತರಾದ ಬೆಳೆಗಾರರು, ಜಿಲ್ಲೆಯ ಕೊಣನೂರು, ರಾಮನಾಥಪುರ, ಆಲೂರು, ಅರಕಲಗೂಡು ತಾಲ್ಲೂಕಿನಲ್ಲಿ ವ್ಯಾಪಕವಾಗಿ ಶುಂಠಿ ಕೃಷಿ ಆರಂಭಿಸಿದರು. ಈಗ ಅದುವೇ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.</p>.<p>ಉತ್ತಮ ಆದಾಯದ ನಿರೀಕ್ಷೆಯಿ ಇಟ್ಟುಕೊಂಡು ಹಿಂದಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಶುಂಠಿ ಬೆಳೆಯಲು ಮುಂದಾದ ಬೆಳೆಗಾರರನ್ನು, ಈ ವರ್ಷದ ಬೆಲೆ ಕುಸಿತವು ಇನ್ನಿಲ್ಲದಂತೆ ಕಾಡಿದೆ.</p>.<p>ಶುಂಠಿ ಕಟಾವು ಪ್ರಾರಂಭವಾದ 2024 ರ ಅಗಸ್ಟ್ನಲ್ಲಿ 60 ಕೆ.ಜಿ. ಶುಂಠಿ ಮೂಟೆಗೆ ₹1600 ಬೆಲೆ ಇತ್ತು. ಅಕ್ಟೋಬರ್ನಲ್ಲಿ ₹1,900 ತಲುಪಿ ಸ್ವಲ್ಪ ಆಸೆ ಹುಟ್ಟಿಸಿತ್ತು. ಆದರೆ, ಅಂದಿನಿಂದ ಬೆಲೆ ಇಳಿಮುಖವಾಗಿದ್ದು, ಶುಂಠಿ ಬೆಳೆಗಾರರು ಲಕ್ಷಗಟ್ಟಲೆ ನಷ್ಟ ಅನುಭವಿಸುವಂತಾಗಿದೆ.</p>.<p>ಕಳೆದ ವರ್ಷ ಶುಂಠಿ ಕಟಾವು ಪ್ರಾರಂಭವಾದ ದಿನದಲ್ಲಿ ಪ್ರತಿ 60 ಕೆ.ಜಿ. ಮೂಟೆಗೆ ಬೆಲೆಯು ₹3,500 ದಿಂದ ಪ್ರಾರಂಭವಾಗಿ ಗರಿಷ್ಠ ₹6ಸಾವಿರ ತಲುಪಿತ್ತು. ಸದ್ಯ ಪ್ರತಿ 60 ಕೆ.ಜಿ. ಮೂಟೆಗೆ ₹700 ರಿಂದ ₹1ಸಾವಿರ ದರವಿದೆ.</p>.<p>ಕಳೆದ ವರ್ಷ ಪ್ರತಿ ಮೂಟೆ ಬೀಜದ ಶುಂಠಿಗೆ ₹6,200 ರಿಂದ ₹6,500ರವರೆಗೆ ಬೆಲೆ ಇತ್ತು. ಈ ವರ್ಷ ದರ ಕುಸಿತ ಹಿನ್ನೆಲೆಯಲ್ಲಿ ಬೀಜದ ಶುಂಠಿ ಬೆಲೆ ₹1,700 ದಿಂದ ₹1,800 ಕ್ಕೆ ಕುಸಿದಿದೆ.</p>.<p>ಒಂದು ಎಕರೆ ವಿಸ್ತೀರ್ಣದಲ್ಲಿ 400 ಚೀಲ ಶುಂಠಿ ಇಳುವರಿ ಬಂದರೂ, ಇಂದಿನ ದರದಲ್ಲಿ ಒಟ್ಟಾರೆ ₹4 ಲಕ್ಷ ದೊರಕುತ್ತಿದ್ದು, ₹6ಲಕ್ಷದಿಂದ ರಿಂದ ₹6.5 ಲಕ್ಷ ಖರ್ಚಾಗಿದೆ. ಎಕರೆಯೊಂದರಲ್ಲಿ ಶುಂಠಿ ಬೆಳೆದ ಬೆಳೆಗಾರರಿಗೆ ₹2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.</p>.<p>ಕಳೆದ ವರ್ಷ ಶುಂಠಿಗೆ ಹೆಚ್ಚಿನ ಬೆಲೆ ದಕ್ಕಿದ್ದರಿಂದ ಉತ್ತೇಜಿತರಾದ ಅನೇಕರು ಮೊದಲ ಬಾರಿಗೆ ಶುಂಠಿ ಬೆಳೆಯಲು ಮುಂದಾಗಿದ್ದು, ಅವರಿಗೆ ಲಕ್ಷಾಂತರ ನಷ್ಟವಾಗಿದ್ದು, ಶುಂಠಿಯ ಸಹವಾಸವೇ ಬೇಡ ಎನ್ನುವಂತಾಗಿದೆ.</p>.<p>ಹಸಿ ಶುಂಠಿ ಬೆಲೆಯು ಇಳಿಮುಖವಾಗಿರುವುದರಿಂದ ಈ ವರ್ಷ ಶುಂಠಿ ಕೃಷಿ ಕೈಗೊಳ್ಳಲು ಬೆಳೆಗಾರರು ಆಸಕ್ತಿ ತೋರಿಲ್ಲ. ಅನೇಕ ವರ್ಷಗಳಿಂದ ಬೆಳೆಯುತ್ತಿರುವ ಕೆಲವೇ ಕೆಲವರು ಜಮೀನನ್ನು ಉತ್ತಿ, ಹದ ಮಾಡಲು ಪ್ರಾರಂಭಿಸಿದ್ದಾರೆ. ಕೋಳಿಗೊಬ್ಬರಕ್ಕೂ ಕಳೆದ ವರ್ಷವಿದ್ದ ಬೇಡಿಕೆ ಕುಗ್ಗಿದೆ. ಕಾರ್ಮಿಕರಿಗೆ ನೀಡುತ್ತಿದ್ದ ಕೂಲಿ ಇಳಿಯದೇ ದುಬಾರಿ ಎನಿಸಿದೆ.</p>.<p>ಕಳೆದ ವರ್ಷ ಫೆಬ್ರುವರಿ ಸಮಯಕ್ಕೆ ಬಹುತೇಕ ಶುಂಠಿ ಕಿತ್ತು ಮಾರಾಟ ಮಾಡಲಾಗಿತ್ತು. ಈ ವರ್ಷ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅದೆಷ್ಟೋ ಬೆಳೆಗಾರರು ಶುಂಠಿಯನ್ನು ಕೀಳದೆ ಜಮೀನಿನಲ್ಲೇ ಬಿಟ್ಟಿದ್ದಾರೆ. ಬಿರುಬಿಸಿಲಿನಲ್ಲಿ ಅದಕ್ಕೆ ನೀರುಣಿಸಲು ಸುಸ್ತಾಗುತ್ತಿದ್ದಾರೆ.</p>.<p><strong>ನಿರ್ವಹಣೆ:</strong> ಚಿದಂಬರಪ್ರಸಾದ, ಪೂರಕ ಮಾಹಿತಿ: ಗಂಗೇಶ್ ಬಿ.ಪಿ., ಎಂ.ಪಿ. ಹರೀಶ್.</p>.<p><strong>ಬೇರೆ ರಾಜ್ಯಗಳಲ್ಲಿ ಹೆಚ್ಚು ಇಳುವರಿ</strong></p><p>ಕೇರಳ, ಮಹಾರಾಷ್ಟದ ಸತಾರ, ಔರಂಗಾಬಾದ್, ಆಸ್ಸಾಂ ಮತ್ತು ಛತ್ತಿಸಗಢ ರಾಜ್ಯಗಳಲ್ಲಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದು, ಅಲ್ಲಿ ಕರ್ನಾಟಕಕ್ಕಿಂತ ಉತ್ತಮ ಇಳುವರಿ ದೊರೆಯುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಶುಂಠಿ ಬೆಲೆಯು ಕುಸಿದಿದೆ.</p><p>ಸತೀಶ್ ಕೆ.ಟಿ., ಶುಂಠಿ ಬೆಳೆಗಾರ, ಕಾರ್ಗಲ್</p> <p><strong>ಲಕ್ಷಾಂತರ ರೂಪಾಯಿ ನಷ್ಟ</strong></p><p>ಹಸಿ ಶುಂಠಿಯ ಬೆಲೆ ಕುಸಿತದಿಂದ ಬೆಳೆಗಾರರೂ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಅನೇಕ ವರ್ಷಗಳಿಂದ ಶುಂಠಿ ಕೃಷಿ ಮಾಡುತ್ತಿರುವ ಬೆಳೆಗಾರರೂ ಮುಗ್ಗರಿಸುವಂತಾಗಿದೆ.</p><p>ಮುರುಳೀಧರ್ ಎಚ್.ಟಿ., ಶುಂಠಿ ಬೆಳೆಗಾರ, ಹೊಸಗುತ್ತಿ</p> <p><strong>ಖರೀದಿಸಲು ಹಿಂದೇಟು</strong></p><p>ಕಳೆದ ವರ್ಷ ಶುಂಠಿ ಮಾರಾಟ ಮಾಡಲು ವ್ಯಾಪಾರಿಗಳು ಜಮೀನಿನ ಬಳಿ ಬರುತ್ತಿದ್ದರು. ಈ ವರ್ಷ ಬೆಲೆ ಇಳಿಕೆಯಿಂದಾಗಿ ಬೆಳೆಗಾರರೆ ವ್ಯಾಪಾರಿಗಳನ್ನು ಹುಡುಕಿಕೊಂಡು ಹೋದರೂ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.</p><p>ಮಂಜು, ಶುಂಠಿ ಬೆಳೆಗಾರ, ಸಿದ್ದಾಪುರ</p> <p><strong>ಬೆಳೆಯದಿರಲು ತೀರ್ಮಾನ</strong></p><p>10 ವರ್ಷಗಳಿಂದ ಶುಂಠಿ ಬೆಳೆಯುತ್ತಿದ್ದು, 2 ವರ್ಷ ಮಾತ್ರ ಲಾಭ ಬಂತು. ಐದು ವರ್ಷ ಖರ್ಚಾದ ಹಣ ಬಂತು. ಈ ವರ್ಷ ಸಂಪೂರ್ಣ ರೋಗ ತಗುಲಿದ್ದು, ಖರ್ಚು ಮಾಡಿದ್ದ ಹಣದಲ್ಲಿ ಶೇ 30 ರಷ್ಟು ಮಾತ್ರ ವಾಪಸ್ ಬಂತು. ಜೀವನದಲ್ಲಿ ಶುಂಠಿ ಬೆಳೆಯಬಾರದು ಎಂದು ತೀರ್ಮಾನಿಸಿದ್ದೇನೆ.</p><p>ಬಿ. ಸಿ. ವೇದಮೂರ್ತಿ, ಕೃಷಿಕ, ಭೈರಾಪುರ</p> <p><strong>ಶುಂಠಿ ಸಹವಾಸವೇ ಬೇಡ</strong></p><p>4 ವರ್ಷಗಳಿಂದ ಬೆಳೆಯುತ್ತಿದ್ದು, ಕಳೆದ ವರ್ಷ ಲಾಭ ದೊರಕಿತು. ಈ ವರ್ಷ ದುಪ್ಪಟ್ಟು ಬೆಳೆ ನಾಟಿ ಮಾಡಿದೆ. ಬೆಳೆ ಸಂಪೂರ್ಣ ರೋಗ ತಗುಲಿ, ನಷ್ಟ ಅನುಭವಿಸಬೇಕಾಗಿದೆ. ಶುಂಠಿ ಸಹವಾಸ ಬೇಡವೇ ಬೇಡ.</p><p>ಶಿವನಂಜೇಗೌಡ, ಕೃಷಿಕ, ಮರಸು ಗ್ರಾಮ</p> <p><strong>ಹೊಸರೋಗದ ತಲೆನೋವು</strong></p><p>ಶುಂಠಿಯ ಬೆಲೆ ಕುಸಿದರೂ ಕೂಲಿಯ ದರ ಇಳಿಕೆಯಾಗಿಲ್ಲ. ಕಳೆದ ವರ್ಷದಿಂದ ಶುಂಠಿಗೆ ಹೊಸದಾಗಿ ತಗುಲುತ್ತಿರುವ ಕೆಂಪು ಕೊಳೆ ವೈರಸ್ ಮತ್ತಷ್ಟು ಭಯ ತಂದಿದೆ. ಈ ರೋಗ ತಗುಲಿದ 3–4 ದಿನಗಳಲ್ಲೆ ಕಾಂಡ ಒಣಗಿ ಗಿಡವೇ ಇಲ್ಲದಂತಾಗುತ್ತದೆ.</p><p>ಮನು, ಶುಂಠಿ ಬೆಳೆಗಾರ, ಹೊಡೆನೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>