<p><strong>ಹಾಸನ:</strong> ಶಿವಮೊಗ್ಗದ ಹುಣಸೋಡಿ ಬಳಿ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಜಿಲ್ಲೆಯ<br />ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ.</p>.<p>ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಮಂಗಳವಾರವಷ್ಟೇ ಹಾಸನ ತಾಲ್ಲೂಕಿನ ಇಂದ್ರಾಪುರ ಗ್ರಾಮದ<br />ಹನುಮಂತಪುರದ ಮಂಜೇಗೌಡರಿಗೆ ಸೇರಿದ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ, 1200 ಜೆಲೆಟಿನ್ ಟ್ಯೂಬ್,<br />2 ಡಿಟೋನೆಟರ್,10 ಕೆ.ಜಿ ಅಮೋನಿಯಂ ನೈಟ್ರೇಟ್ ಹಾಗೂ ಕನೆಕ್ಟಿಂಗ್ ವೈರ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ಜಾಗೃತಗೊಂಡ ಜಿಲ್ಲಾಡಳಿತ, ಕ್ರಷರ್, ಕ್ವಾರಿ, ಮರಳು ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ<br />ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.</p>.<p>ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಹಾಸನ,<br />ಅರಸೀಕೆರೆ ತಾಲ್ಲೂಕಿನ ನಾಗರಿಕರು ಹಾಗೂ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ<br />ನಡೆಸಿರುವ ಉದಾಹರಣೆಯೂ ಇದೆ. ‘ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯಕ್ರಮ ಜರುಗಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ.</p>.<p>ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ 101 ಮಂದಿ ಅನುಮತಿ<br />ಪಡೆದಿದ್ದಾರೆ. ಇದರಲ್ಲಿ ಇಬ್ಬರು ಸ್ಫೋಟಕ ಪೂರೈಸಲು ಪರವಾನಗಿ ಹೊಂದಿದ್ದಾರೆ. ಆಲೂರಿನಲ್ಲಿ 7,<br />ಅರಕಲಗೂಡು 7, ಅರಸೀಕೆರೆ 31, ಬೇಲೂರು 10, ಚನ್ನರಾಯಪಟ್ಟಣ 5, ಹಾಸನ 20, ಹೊಳೆನರಸೀಪುರ 21<br />ಕಲ್ಲು ಕ್ವಾರಿಗಳಿವೆ.</p>.<p>ಬೇಲೂರು 4, ಚನ್ನರಾಯಪಟ್ಟಣ 4, ಹಾಸನ 29, ಹೊಳೆನರಸೀಪುರ 9, ಆಲೂರು ಹಾಗೂ ಅರಕಲಗೂಡು<br />ತಾಲ್ಲೂಕಿನಲ್ಲಿ ತಲಾ 6, ಅರಸೀಕೆರೆ 17 ಸೇರಿ 75 ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ.</p>.<p>ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 3, ಹೊಳೆನರಸೀಪುರ 4, ಆಲೂರು 3 , ಅರಸೀಕೆರೆ 2, ಬೇಲೂರು<br />9,ಅರಕಲಗೂಡು 7, ಸಕಲೇಶಪುರ 1, ಹಾಸನ ತಾಲ್ಲೂಕಿನಲ್ಲಿ 7 ಗ್ರಾನೈಟ್ಸ್ ಫ್ಯಾಕ್ಟರಿ<br />ಕಾರ್ಯನಿರ್ವಹಿಸುತ್ತಿವೆ.</p>.<p>‘ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸ್ಫೋಟಕ ಬಳಸುವ ಗ್ರಾನೈಟ್ಸ್ ಕ್ವಾರಿಗಳು ಇಲ್ಲ. ಪರವಾನಗಿ ನೀಡುವಾಗ<br />ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುತ್ತಾರೆ. ಜಿಲ್ಲಾಧಿಕಾರಿ ಸೂಚನೆಯಂತೆ<br />ಕ್ವಾರಿಗಳ ಮಾಲೀಕರಿಗೆ ಸ್ಪೋಟಕ ಬಳಸುವಾಗ ಮುನ್ನೆಚ್ಚರಿಕೆ ವಹಿಸಬೇಕು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ<br />ನೋಟಿಸ್ ಜಾರಿ ಮಾಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧ 2019–20ರಲ್ಲಿ ₹30 ಲಕ್ಷ ದಂಡ<br />ವಸೂಲು ಮಾಡಲಾಗಿದೆ. ಅಕ್ರಮ ಪತ್ತೆಗಾಗಿಯೇ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ್ ಇದೆ’ಎಂದು ಗಣಿ<br />ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ನಾಗರಾಜ್ ತಿಳಿಸಿದರು.</p>.<p>‘ಜಿಲ್ಲೆಯ ವಿವಿಧೆಡೆ 23 ಮರಳು ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 85.30 ಎಕರೆ<br />ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಕ್ರಮವಾಗಿ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ<br />ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಶಿವಮೊಗ್ಗದ ಹುಣಸೋಡಿ ಬಳಿ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಜಿಲ್ಲೆಯ<br />ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ.</p>.<p>ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಮಂಗಳವಾರವಷ್ಟೇ ಹಾಸನ ತಾಲ್ಲೂಕಿನ ಇಂದ್ರಾಪುರ ಗ್ರಾಮದ<br />ಹನುಮಂತಪುರದ ಮಂಜೇಗೌಡರಿಗೆ ಸೇರಿದ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ, 1200 ಜೆಲೆಟಿನ್ ಟ್ಯೂಬ್,<br />2 ಡಿಟೋನೆಟರ್,10 ಕೆ.ಜಿ ಅಮೋನಿಯಂ ನೈಟ್ರೇಟ್ ಹಾಗೂ ಕನೆಕ್ಟಿಂಗ್ ವೈರ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ಜಾಗೃತಗೊಂಡ ಜಿಲ್ಲಾಡಳಿತ, ಕ್ರಷರ್, ಕ್ವಾರಿ, ಮರಳು ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ<br />ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.</p>.<p>ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಹಾಸನ,<br />ಅರಸೀಕೆರೆ ತಾಲ್ಲೂಕಿನ ನಾಗರಿಕರು ಹಾಗೂ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ<br />ನಡೆಸಿರುವ ಉದಾಹರಣೆಯೂ ಇದೆ. ‘ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯಕ್ರಮ ಜರುಗಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ.</p>.<p>ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ 101 ಮಂದಿ ಅನುಮತಿ<br />ಪಡೆದಿದ್ದಾರೆ. ಇದರಲ್ಲಿ ಇಬ್ಬರು ಸ್ಫೋಟಕ ಪೂರೈಸಲು ಪರವಾನಗಿ ಹೊಂದಿದ್ದಾರೆ. ಆಲೂರಿನಲ್ಲಿ 7,<br />ಅರಕಲಗೂಡು 7, ಅರಸೀಕೆರೆ 31, ಬೇಲೂರು 10, ಚನ್ನರಾಯಪಟ್ಟಣ 5, ಹಾಸನ 20, ಹೊಳೆನರಸೀಪುರ 21<br />ಕಲ್ಲು ಕ್ವಾರಿಗಳಿವೆ.</p>.<p>ಬೇಲೂರು 4, ಚನ್ನರಾಯಪಟ್ಟಣ 4, ಹಾಸನ 29, ಹೊಳೆನರಸೀಪುರ 9, ಆಲೂರು ಹಾಗೂ ಅರಕಲಗೂಡು<br />ತಾಲ್ಲೂಕಿನಲ್ಲಿ ತಲಾ 6, ಅರಸೀಕೆರೆ 17 ಸೇರಿ 75 ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ.</p>.<p>ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 3, ಹೊಳೆನರಸೀಪುರ 4, ಆಲೂರು 3 , ಅರಸೀಕೆರೆ 2, ಬೇಲೂರು<br />9,ಅರಕಲಗೂಡು 7, ಸಕಲೇಶಪುರ 1, ಹಾಸನ ತಾಲ್ಲೂಕಿನಲ್ಲಿ 7 ಗ್ರಾನೈಟ್ಸ್ ಫ್ಯಾಕ್ಟರಿ<br />ಕಾರ್ಯನಿರ್ವಹಿಸುತ್ತಿವೆ.</p>.<p>‘ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸ್ಫೋಟಕ ಬಳಸುವ ಗ್ರಾನೈಟ್ಸ್ ಕ್ವಾರಿಗಳು ಇಲ್ಲ. ಪರವಾನಗಿ ನೀಡುವಾಗ<br />ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುತ್ತಾರೆ. ಜಿಲ್ಲಾಧಿಕಾರಿ ಸೂಚನೆಯಂತೆ<br />ಕ್ವಾರಿಗಳ ಮಾಲೀಕರಿಗೆ ಸ್ಪೋಟಕ ಬಳಸುವಾಗ ಮುನ್ನೆಚ್ಚರಿಕೆ ವಹಿಸಬೇಕು, ಸುರಕ್ಷತಾ ಕ್ರಮ ಕೈಗೊಳ್ಳುವಂತೆ<br />ನೋಟಿಸ್ ಜಾರಿ ಮಾಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧ 2019–20ರಲ್ಲಿ ₹30 ಲಕ್ಷ ದಂಡ<br />ವಸೂಲು ಮಾಡಲಾಗಿದೆ. ಅಕ್ರಮ ಪತ್ತೆಗಾಗಿಯೇ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ್ ಇದೆ’ಎಂದು ಗಣಿ<br />ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ನಾಗರಾಜ್ ತಿಳಿಸಿದರು.</p>.<p>‘ಜಿಲ್ಲೆಯ ವಿವಿಧೆಡೆ 23 ಮರಳು ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 85.30 ಎಕರೆ<br />ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಕ್ರಮವಾಗಿ ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ<br />ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>